ಬೆಂಗಳೂರು: ಎಸ್ ಡಿಜೆ ಗೋಲ್ಡ್ ಕಂಪನಿ ವಿರುದ್ಧ ಚಿನ್ನ ಪಡೆದು ವಂಚಿಸಿರುವ ಆರೋಪ ಕೇಳಿ ಬಂದಿದೆ. ಆದರೆ, ಕಂಪನಿಯು ಡಿಜಿಎಫ್ ಎಂದು ಹೆಸರು ಬದಲಾಯಿಸಿಕೊಂಡಿದೆ ಎಂಬ ಆರೋಪ ಕೂಡ ಕೇಳಿ ಬಂದಿದೆ.
ಈಗ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲೀಕ ಜ್ಞಾನ ಸೌಂದರ್ಯ ರಾಜ್ ವಿರುದ್ಧ ದೂರು ದಾಖಲಾಗಿದೆ. ಅನಿತಾ ಎಂಬುವವರು ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಜ್ಞಾನ ಸೌಂದರ್ಯ ರಾಜ್ ಮೈಸೂರಿನಲ್ಲಿ ತನ್ನ ಕಚೇರಿ ಹೊಂದಿದ್ದಾರೆ.
ಅನಿತಾ ಮುತ್ತೂಟ್ ಫೈನಾನ್ಸ್ ನಲ್ಲಿ 154 ಗ್ರಾಂ ಚಿನ್ನವನ್ನು ಒತ್ತೆ ಇಟ್ಟಿದ್ದರು. ಆಗ ಎಸ್ ಡಿಜೆ ಗೋಲ್ಡ್ ಕಂಪನಿ ಅನಿತಾರನ್ನು ಸಂಪರ್ಕ ಮಾಡಿದೆ. ನಿಮ್ಮ ಚಿನ್ನಕ್ಕೆ ಸದ್ಯಕ್ಕಿರುವ ಬೆಲೆಗಿಂತ ಅಧಿಕ ಹಣ ನೀಡುತ್ತೇವೆ. ನಿಮ್ಮ ಚಿನ್ನ ಬಿಡಿಸಿ ನಾವು ಅಡಮಾನ ಇಟ್ಟುಕೊಳ್ಳುತ್ತೇವೆ. ಐದು ವರ್ಷದ ಒಳಗೆ ಯಾವಾಗಾದರು ಬಿಡಿಸಿಕೊಳ್ಳಬಹುದು ಎಂದಿತ್ತು. ಅದೇ ರೀತಿ ಅನಿತಾ ಖಾತೆಗೆ ಹಣ ಹಾಕಿ ಎಸ್ ಡಿಜೆ ಕಂಪನಿ, ತನ್ನ ಬಳಿ ಚಿನ್ನ ಇಟ್ಟುಕೊಂಡಿದೆ.
ಆದರೆ ಕಳೆದ ಒಂದು ವರ್ಷದಿಂದ ಚಿನ್ನ ಕೇಳಿದರೆ, ನೀಡುತ್ತಿಲ್ಲ ಎಂದು ಅನಿತಾ ಆರೋಪಿಸಿದ್ದಾರೆ. ಈಗ ಕಂಪನಿಯಿಂದ ನೊಂದಿರುವ ಅನಿತಾ, ನಮ್ಮ ಚಿನ್ನವನ್ನು ಮಾರಾಟ ಮಾಡಿದ್ದಾರೆ. ಇದೇ ರೀತಿ ಸಾವಿರಾರು ಜನರಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.



















