ದೇವದಾಸಿ ಆಗಬೇಗಿದ್ದ ಯುವತಿಯೊಬ್ಬರನ್ನು ರಕ್ಷಿಸಿದ ಬಳ್ಳಾರಿಯ ಕುರುಗೋಡು ಪೊಲೀಸರು, ಪ್ರೀತಿಸಿದ ಯುವಕನೊಂದಿಗೆ ಮದುವೆ ಕೂಡ ಮಾಡಿಸಿದ್ದಾರೆ.
ಬಳ್ಳಾರಿಯ ಕುರುಗೋಡು ತಾಲೂಕಿನ ವದ್ದಟ್ಟಿ ಕ್ರಾಸ್ ನ ಯುವತಿಯೊಬ್ಬರು ಅದೇ ಗ್ರಾಮದ ಯುವಕನನ್ನು ಪ್ರೀತಿಸುತ್ತಿದ್ದರು. ಆದರೆ, ಕುಟುಂಬಸ್ಥರು ಮಾತ್ರ ಯುವತಿಯನ್ನು ಬಲವಂತವಾಗಿ ದೇವದಾಸಿಯಾಗಿ ಮಾಡಲು ಹೊರಟಿದ್ದರು. ಮಾಹಿತಿ ತಿಳಿದ ಪಿಎಸ್ ಸುಪ್ರೀತ್ ವಿರುಪಾಕ್ಷ, ಯುವತಿಯ ಪೋಷಕರಿಗೆ ಬುದ್ಧಿ ಹೇಳಿ, ಯುವತಿಯನ್ನು ರಕ್ಷಿಸಿ, ಪ್ರೀತಿಸಿದ ಯುವಕನೊಂದಿಗೆ ಮದುವೆ ಮಾಡಿಸಿದ್ದಾರೆ.
ಕುರುಗೋಡು ದೊಡ್ಡ ಬಸವೇಸ್ವರ ದೇವಸ್ಥಾನದಲ್ಲಿ ಈ ವಿವಾಹ ನಡೆದಿದೆ. ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.