ಶಿವಮೊಗ್ಗ: 1931ರ ಬಳಿಕ ಸಾಮಾಜಿಕ ಮತ್ತು ಶೈಕ್ಷಿಣಿಕ ಸಮೀಕ್ಷೆಗಳು ಮಹತ್ವ ಪಡೆದಿವೆ ಎಂದು ಶಿವಮೊಗ್ಗದಲ್ಲಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಗಣತಿ ವರದಿ ಅಮೂಲಾಗ್ರವಾಗಿ ಚರ್ಚೆ ಮಾಡಿ ತೆಗೆದುಕೊಳ್ಳಲಾಗುತ್ತಿದೆ. ನಮ್ಮ ದೇಶದಲ್ಲಿ ಜಾತಿ ಎಂಬುವುದು ವಾಸ್ತವವಾಗಿದೆ. ಆದರೆ, ಜಾತಿ, ಭೇದ ತೊಲಗುವುದು ಅಷ್ಟೇ ಮುಖ್ಯವಾಗಿದೆ. ಜಾತಿ ವ್ಯವಸ್ಥೆ ಈ ದೇಶದಿಂದಲೇ ತೊಲಗಬೇಕಿದೆ. ಸಾಮಾಜಿಕ ನ್ಯಾಯಕ್ಕೆ ಹೆಚ್ಚು ಒತ್ತು ನೀಡಬೇಕಿದೆ. ಜಾತಿಗಳಿಂದ ವಿಭಜನೆಯಗಿದ್ದೇವೆ. ಅದು ಕೃತಕವಾಗಿದೆ. ನಾವು ನೀಡಿದ ವರದಿಯ 54 ಅಂಶಗಳಲ್ಲಿ ಜಾತಿ ಅಂಶ ಕೂಡ ಇದೆ. ಸರ್ವೋಚ್ಚ ನ್ಯಾಯಾಲಯದ ಸೂಚನೆ ಮೇರೆಗೆ ಜಾತಿ ಆಧಾರದ ಮೇಲೆ ವರದಿ ನೀಡಬಾರದೆಂದು ಸಮೀಕ್ಷೆಗೆ ಒತ್ತು ನೀಡಿದ್ದೇವು ಎಂದು ಹೇಳಿದ್ದಾರೆ.
ಜಾತಿ ಎಂಬುವುದು ನಮ್ಮ ಶತ್ರು. ಆ ಶತ್ರುವನ್ನು ನಮ್ಮ ಸಮಾಜದಿಂದ ಹೊಡೆದೊಡಿಸಬೇಕಾಗಿದೆ. ನಮ್ಮ ಸಮೀಕ್ಷೆಯ ವರದಿಯಲ್ಲಿ ಈ ಎಲ್ಲವನ್ನು ಹೇಳಲಾಗಿದೆ. ಆಗಾಗ ಜಾತಿ ಗಣತಿಯಂತಹ ಸಮೀಕ್ಷೆ ನಡೆಸುವ ಅಗತ್ಯವಿದೆ. ನಮ್ಮ ದೇಹದ ಆರೋಗ್ಯ ಪರೀಕ್ಷಿಸುವ ಹಾಗೆ ಜಾತಿ ಗಣತಿ ಸಮೀಕ್ಷೆ ಕೂಡ ನಡೆಸಬೇಕೆಂದು ಮಹಾತ್ಮ ಗಾಂಧಿಯವರೇ ಹೇಳಿದ್ದಾರೆ. ದತ್ತಾಂಶದ ಮೂಲಕ ಸರಿ, ತಪ್ಪು ಅಂಕಿ ಅಂಶ ಕಾಯ್ದಿರಿಸಲಾಗಿದೆ. ಅಸಮಾನತೆಯನ್ನು ಸರಿದೂಗಿಸಲು ಇಂತಹ ಸಮೀಕ್ಷೆಗಳು ಅತ್ಯಗತ್ಯ. ಎಲ್ಲರಿಗೂ ಪ್ರಾಶಸ್ತ್ಯ ಸಿಗಬೇಕಾದರೆ ಜನಸಂಖ್ಯೆ ಗಣತಿ ಬಹಳ ಮುಖ್ಯ ಎಂದು ಹೇಳಿದ್ದಾರೆ.