ಬೆಂಗಳೂರು: ರಾಮನವಮಿಯ ಹಿನ್ನೆಲೆಯಲ್ಲಿ ಬೆಂಗಳೂರು ಉತ್ತರದ ಹೆಬ್ಬಾಳ ವಿಶ್ವ ಹಿಂದೂ ಪರಿಷದ್ ಹಾಗೂ ಬಜರಂಗದಳ ರಾಮನವಮಿ ಉತ್ಸವ ಸಮಿತಿಯಿ ವತಿಯಿಂದ 4ನೇ ವರ್ಷದ ಬೃಹತ್ ಶೋಭಾ ಯಾತ್ರೆ ಮತ್ತು ಸಭಾ ಕಾರ್ಯಕ್ರಮ ಏ. 13ರಂದು ನಡೆಯಲಿದೆ.
ಅಂದು ಬೆಳಗ್ಗೆ 10ಕ್ಕೆ ರಾಮತಾರಕ ಹೋಮ ನಡೆಯಲಿದೆ. ಅಶ್ವಥ್ ನಗರದ ಪ್ರಸನ್ನಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ರಾಮತಾರಕ ಹೋಮ ನಡೆಯಲಿದೆ. ಮಧ್ಯಾಹ್ನ 3ಕ್ಕೆ ಅಶ್ವಥ್ ನಗರದ ಪ್ರಸನ್ನಾಂಜನೇಯ ದೇವಸ್ಥಾನದಲ್ಲಿ ಶೋಭಾಯಾತ್ರೆ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ಕೊತ್ತನೂರು ಕೃಷ್ಣ ಗೋಶಾಲೆಯ ಸಂಸ್ಥಾಪಕ ಸ್ವಾಮಿ ಪೂಕ್ ರಾಜ್ ಮಹರಾಜ್ ಚಾಲನೆ ನೀಡಲಿದ್ದಾರೆ.

ಸಂಜೆ 7ಕ್ಕೆ ಭೂಪಸಂದ್ರದ ಕಲ್ಪನಾ ಚಾವ್ಲ ರಸ್ತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ದಿವ್ಯ ಸಾನಿಧ್ಯವನ್ನು ಉತ್ತರಾಖಂಡ ಮಾಯಪುರಿ ಹರಿದ್ವಾರ ಪಂಚಾಯ್ತಿ ಅಖಾಡ ನಿರಂಜನೀ ನಾಗಸಾಧು ತಪೋನಿಧಿ ಬಾಬಾ ವಿಠ್ಠಲ್ ಗಿರಿ ಮಹಾರಾಜ್, ಬೆಂಗಳೂರು ಯಲಹಂಕದಲ್ಲಿನ ರಾಮಕೃಷ್ಣ ವಿವೇಕಾನಂದ ವೇದಾಂತ ಆಶ್ರಮದ ಸ್ವಾಮಿ ಅಭಯಾನನಂದ ಮಹಾರಾಜ್ ವಹಿಸಲಿದ್ದಾರೆ.

ಖ್ಯಾತ ವೈದ್ಯ, ಸಮಾಜ ಸುಧಾರಕ ಡಾ. ನಾಗೇಶ್ ಶಾನಭೋಗ್ ಅಧ್ಯಕ್ಷತೆ ವಹಿಸಲಿದ್ದಾರೆ. ವಕ್ತಾರರಾಗಿ ವಿಶ್ವ ಹಿಂದೂ ಪರಿಷದ್- ಕರ್ನಾಟಕ ದಕ್ಷಿಣ ಪ್ರಾಂತ ವಿಶೇಷ ಸಂಪರ್ಕ ಪ್ರಮುಖ್ ಎಂ.ಎಸ್. ಮಂಜುನಾಥ್ ಆಗಮಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜ್ಯೋತಿಷಿ ಡಾ. ವಾಸುದೇವ ಭಟ್, ಗಾಯತ್ರಿ ಪರಿಷತ್ ಅಧ್ಯಕ್ಷ ಸತ್ಯ ನಾರಾಯಣ, ಕನ್ನಿಕಾಪರಮೇಶ್ವರಿ, ರಾಮದೇವರ ದೇವಸ್ಥಾನದ ಅಧ್ಯಕ್ಷ ಅನಂತಕುಮಾರ್ ಜಿ.ಟಿ, ರಾಘವೇಂದ್ರ ಸ್ವಾಮಿ ಮಠದ ಅಧ್ಯಕ್ಷ ಜೆ.ಕೆ. ಸುಧಾಕರ, ಪ್ರಾಂತ ಸಹ ವ್ಯವಸ್ಥ ಪ್ರಮುಖ್ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾಶಂ ಶ್ರೀಧರ್, ವಿಶ್ವ ಹಿಂದೂ ಪರಿಷತ್ ನ ಬೆಂಗಳೂರು ಉತ್ತರ ವಿಭಾಗದ ಕೆ. ವೆಂಕಟೇಶ್ ಆಗಮಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.