ಚಿಕ್ಕಮಗಳೂರು: ಯುವಕನೋರ್ವ ಈಜಲು ಹೋಗಿ ಸುಳಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಎನ್.ಆರ್.ಪುರ (N R Pura) ತಾಲೂಕಿನ ಗಡಿಗೇಶ್ವರದಲ್ಲಿ ಈ ಘಟನೆ ನಡೆದಿದೆ. ಜಲಾಲ್ (25) ಸಾವನ್ನಪ್ಪಿರುವ ಯುವಕ ಎನ್ನಲಾಗಿದೆ. ಭಾನುವಾರ (ಫೆ.16) ಭದ್ರಾ ನದಿಯಲ್ಲಿ (Bhadra River) ಮೂವರು ಸ್ನೇಹಿತರ ಜೊತೆ ಈಜಲು ತೆರಳಿದ್ದಾಗ ಈ ಘಟನೆ ನಡೆದಿದೆ. ಜಲಾಲ್ ಸುಳಿಗೆ ಸಿಲುಕಿದ್ದರಿಂದ ಆತನನ್ನು ರಕ್ಷಿಸಲು ಆಗಿಲ್ಲ.
ಶವಕ್ಕಾಗಿ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ತೀವ್ರ ಶೋಧ ಕಾರ್ಯ ನಡೆಸಿದ್ದರು. ಆದರೆ, ಇದುವರೆಗೂ ಶವ ಪತ್ತೆಯಾಗಿಲ್ಲು. ತಜ್ಞರು, ಅಗ್ನಿಶಾಮಕ ದಳದ ಸಿಬ್ಬಂದಿ ಮೃತದೇಹಕ್ಕಾಗಿ ಹುಡುಕಾಟ ನಡೆಸಿದ್ದಾರೆ.