ನವದೆಹಲಿ: ವಿರಾಟ್ಕೊಹ್ಲಿ ಭಾರತ ತಂಡ ಕಂಡಿರುವ ಅತ್ಯಂತ ಶಿಸ್ತಿನ ನಾಯಕ. ಆಕ್ರಮಣಕಾರಿ ಸ್ವಭಾವ ಹೊಂದಿದ್ದ ಅವರು ಗೆಲ್ಲುವುದೇ ನಮ್ಮ ಗುರಿ ಎಂಬಂತೆ ಆಡುತ್ತಿದ್ದಾರೆ. ಹೀಗಾಗಿ ಶಾಂತಿ, ಸಂಯಮವನ್ನು ಮರೆಯುತ್ತಿದ್ದರು. ಎದುರಾಳಿಗಳ ವಿರುದ್ಧ ಅವರು ತಮ್ಮ ಪ್ರತಾಪವನ್ನು ತೋರಿದ್ದನ್ನು ನಾವೆಲ್ಲರೂ ಗಮನಿಸಿದ್ದೇವೆ. ಆದರೆ ಅವರು ಕಠಿಣ ನಿಲವು ತಂಡದ ಆಟಗಾರರ ಮೇಲೂ ಪರಿಣಾಮ ಬೀರಿದೆ ಎಂಬುದು ಈಗ ಗೊತ್ತಾಗಿದೆ. ಅದಕ್ಕೆ ಕಾರಣ ಕನ್ನಡಿಗ ಕ್ರಿಕೆಟಿಗ ರಾಬಿನ್ಉತ್ತಪ್ಪ ಅವರ ಹೇಳಿಕೆ.
ಲಲ್ಲನ್ಟಾಪ್ಯು ಟ್ಯೂಬ್ಚಾನೆಲ್ನಲ್ಲಿ ‘ಟೇಕ್ಯುವಿ ಪಾ’ಸ್ಇನ್ಸ್ಟೆನ್ಸ್’ ಶೀರ್ಷಿಕೆಯ ಸಂದರ್ಶನದಲ್ಲಿ ಉತ್ತಪ್ಪ ಕೊಹ್ಲಿ ವಿರುದ್ಧ ಈ ಆರೋಪಗಳನ್ನು ಮಾಡಿದ್ದಾರೆ.

ಕ್ಯಾನ್ಸರ್ಗೆದ್ದು ಕ್ರಿಕೆಟ್ಗೆ ಮರಳಿದ ಆಲ್ರೌಂಡರ್ಯುವರಾಜ್ ಸಿಂಗ್ ಅವರ ಕ್ರಿಕೆಟ್ಜೀವನ ಮೊಟಕುಗೊಳ್ಳಲು ಪರೋಕ್ಷವಾಗಿ ವಿರಾಟ್ಕೊಹ್ಲಿ ಕಾರಣ ಎಂದು ಆರೋಪಿಸಿದ್ದಾರೆ. ಹೀಗಾಗಿ ಕೊಹ್ಲಿಯ ಕಠಿಣ ನಿಲವು ಪ್ರತಿಭಾವಂತ ಕ್ರಿಕೆಟಿಗನ ವೃತ್ತಿಯನ್ನು ಅರ್ಧಕ್ಕೆ ಮೊಟಕುಗೊಳಿಸುವಂತೆ ಮಾಡಿದೆ ಎಂದು ಉತ್ತಪ್ಪ ಹೇಳಿದ್ದಾರೆ.
ಕ್ಯಾನ್ಸರ್ಗೆದ್ದು ತಂಡಕ್ಕೆ ಮರಳಿ ಬಂದಾಗ ತಮಗೆ ಫಿಟ್ನೆಸ್ನಲ್ಲಿ ಕೆಲವು ರಿಯಾಯಿತಿ ನೀಡುವಂತೆ ಯುವರಾಜ್ಸಿಂಗ್ಮನವಿ ಮಾಡಿದ್ದರು. ತಂಡದ ಆಗಿನ ನಾಯಕ ಕೊಹ್ಲಿ ಒಪ್ಪಿರಲಿಲ್ಲ. ಹೀಗಾಗಿ ಅವರಿಗೆ ಮುಂದುವರಿಸಲು ಸಾಧ್ಯವೇ ಆಗಲಿಲ್ಲ ಎಂದು ಹೇಳಿದ್ದಾರೆ.
ಸೀಮಿತ ಓವರುಗಳ ಕ್ರಿಕೆಟ್ನಲ್ಲಿ ದೇಶ ಕಂಡ ಶ್ರೇಷ್ಠ ಆಟಗಾರರಲ್ಲಿ ಒಬ್ಬರೆನಿಸಿದ ಯುವರಾಜ್ ಸಿಂಗ್, 2011ರಲ್ಲಿ ಎಂ.ಎಸ್. ಧೋನಿ ನಾಯಕತ್ವದಲ್ಲಿ ಭಾರತ ತಂಡ ಏಕದಿನ ಕಪ್ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ನಂತರ ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಅವರು ಅಮೆರಿಕದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಹೋರಾಟಗಾರ ಯುವರಾಜ್ಸಿಂಗ್ಮತ್ತೆ ತಂಡಕ್ಕೆ ಸೇರಲು ಸರ್ವ ಪ್ರಯತ್ನ ಮಾಡಿದ್ದರು.
ಅಂತಿಮವಾಗಿ ತಂಡದಲ್ಲಿ ಮರಳಿ ಸ್ಥಾನ ಸಂಪಾದಿಸಿದ್ದ ಯುವರಾಜ್ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಶತಕವನ್ನೂ ಬಾರಿಸಿದ್ದರು. ಆದರೆ 2017ರ ಚಾಂಪಿಯನ್ಸ್ ಟ್ರೋಫಿಯಲ್ಲಿ ನಿರಾಶಾದಾಯಕ ಪ್ರದರ್ಶನದ ನಂತರ ಅವರನ್ನು ತಂಡದಿಂದ ಕೈಬಿಡಲಾಯಿತು. 2019ರಲ್ಲಿ ಅವರು ಎಲ್ಲ ಮಾದರಿಯ ಕ್ರಿಕೆಟ್ನಿಂದ ನಿವೃತ್ತರಾಗಬೇಕಾಯಿತು.
ಯವಿಯಿಂದಲೇ ವಿಶ್ವ ಕಪ್ಗೆದ್ದ ಭಾರತ: ರಾಬಿನ್
ಕ್ಯಾನ್ಸರ್ ಗೆದ್ದ ವ್ಯಕ್ತಿ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಮರಳಿದ್ದು ದೊಡ್ಡ ಸಾಹಸ. ಅವರು ನಮಗೆ ವಿಶ್ವಕಪ್ ಗೆಲ್ಲಿಸಿಕೊಟ್ಟವರು. ಹಾಗೆ ನೋಡಿದರೆ ಎರಡು ವಿಶ್ವಕಪ್ಅವರಿದ್ದಾಗ ಭಾರತ ಗೆದ್ದಿತ್ತು. ಹೀಗಾಗಿ ಅವರಿಗೆ ಅವಕಾಶಗಳನ್ನು ನೀಡುವುದರಲ್ಲಿ ಯಾವುದೇ ತಪ್ಪು ಇರಲಿಲ್ಲ ಎಂದು ರಾಬಿನ್ಹೇಳಿದ್ದಾರೆ.
ಕ್ಯಾನ್ಸರ್ಹಾಗೂ ಚಿಕಿತ್ಸೆಯ ಕಾರಣ ಯುವರಾಜ್ಅವರ ಶ್ವಾಸಕೋಶದ ಸಾಮರ್ಥ್ಯ ಕ್ಷೀಣಿಸಿತ್ತು. ಹೀಗಾಗಿ ಅವರಿಗೆ ವಿನಾಯಿತಿಯ ಅಗತ್ಯಿತ್ತು. ಅವರು ಸಮಸ್ಯೆ ಎದುರಿಸುವಾಗ ನಾಯಕರಾಗಿ ಕೊಹ್ಲಿ ಬೆಂಬಲ ನೀಡಬೇಕಾಗಿತ್ತು. ಅಂದ ಹಾಗೆ ನನಗೆ ಇದನ್ನು ಯಾರೂ ಹೇಳಿಲ್ಲ. ನಾನೇ ಗಮನಿಸಿದ್ದೇ ಎಂದು ಎಂದು ರಾಬಿನ್ ಹೇಳಿದ್ದಾರೆ.
‘ಕೊಹ್ಲಿ ಯುವರಾಜ್ಸಿಂಗ್ಅವರ ಪರದಾಟ ನೋಡಿದ್ದಾರೆ. ನಾಯಕರಾಗಿ ಒಂದು ಫಿಟ್ನೆಸ್ವಿಚಾರದಲ್ಲಿ ನಿಯಮಗಳನ್ನು ಕಾಪಾಡಿಕೊಂಡಿದ್ದು ಸರಿ. ಆದರೆ ನಿಯಮಗಳಿಗೂ ಕೆಲವೊಮ್ಮೆ ಅಪವಾದಗಳಿರುತ್ತವೆ. ಅವರಿಗೆ ಆ ರಿಯಾಯಿತಿ ಕೊಡಬಹುದಿತ್ತು. ಏಕೆಂದರೆ ಅವರು ಟೂರ್ನಿಗಳನ್ನು ಗೆಲ್ಲಿಸಿಕೊಟ್ಟವರು, ಕ್ಯಾನ್ಸರ್ ಗೆದ್ದವರು’ ಎಂದು ಉತ್ತಪ್ಪ ಹೇಳಿದ್ದಾರೆ.