ಬೆಂಗಳೂರು: ಮುಸ್ಲಿಂರಿಗೆ ಜೆಡಿಎಸ್ ಏನು ಉಪಕಾರ ಮಾಡಿದೆ ಎಂಬ ಕಾರಣಕ್ಕೆ ಅವರು ಮತ ಹಾಕಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಕಿಡಿಕಾರಿದ್ದಾರೆ.
ಮುಸ್ಲಿಂ ಸಮುದಾಯ ನಮಗೆ ಮತ ಹಾಕಲಿಲ್ಲ ಎಂಬ ನಿಖಿಲ್ ಕುಮಾರಸ್ವಾಮಿ ಹೇಳಿಕೆ ಕುರಿತು ವಿಕಾಸಸೌಧದಲ್ಲಿ ಮಾತನಾಡಿದ ಅವರು, ಮುಸ್ಲಿಂರಿಗೆ ಜೆಡಿಎಸ್ ನವರು ಏನು ಮಾಡಿದ್ದಾರೆ. ಬರೀ ಅವರಿಂದ ವೋಟ್ ಹಾಕಿಸಿಕೊಂಡಿದ್ದಾರೆಯೇ ಹೊರತು. ಅವರಿಗೆ ಯಾವ ಸಹಾಯ ಮಾಡಿಲ್ಲ. ಅವರಿಗೆ ಟಿಕೆಟ್ ನೀಡಿಲ್ಲ. ಅವರಿಗೆ ಯಾವ ಅಧಿಕಾರ ನೀಡಿಲ್ಲ. ಹೀಗಿದ್ದರೂ ಅವರು ಯಾವ ಕಾರಣಕ್ಕೆ ಇವರಿಗೆ ಮತ ಹಾಕಬೇಕು ಎಂದು ಪ್ರಶ್ನಿಸಿದ್ದಾರೆ.
ಕುಮಾರಸ್ವಾಮಿಗೆ ಪಾಪ ಆ ಜನ ಓಟ್ ಹಾಕಿದ್ದರು. ಆದರೆ, ಈಗ ಎಲ್ಲರನ್ನೂ ಬಿಟ್ಟು ಬಿಜೆಪಿ ಜೊತೆಗೆ ಹೋದರು. ಹೀಗಾರಿರುವಾಗ ಅವರು ಯಾಕೆ ಇವರಿಗೆ ಮತ ಹಾಕಬೇಕು. ಮುಸ್ಲಿಂರಿಗೆ ಸೀಟ್ ಕೊಟ್ಟಿದ್ದಾರಾ? ಮಂತ್ರಿ ಮಾಡಿದ್ದಾರಾ? ಇವರೇ ಅವರ ಮೀಸಲಾತಿ ಕಿತ್ತು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಬಿಜೆಪಿಯವರು ಗೋಮುಖ ವ್ಯಾಘ್ರ. ಅವರಿಗೆ ಬೇಕಾಗಿರುವುದು ಪ್ರಚಾರ ಮಾತ್ರ. ಚನ್ನಪಟ್ಟಣ ಚುನಾವಣೆ ಸಂದರ್ಭದಲ್ಲಿ ಕೆಲವು ಹುಡುಗರು ರೈತರ ಪಹಣಿ ಸಂಗ್ರಹ ಮಾಡುತ್ತಿದ್ದರು. ಆಂತರಿಕ ಸಮಸ್ಯೆ ಮುಚ್ಚಿಕೊಳ್ಳಲು ಹೀಗೆ ಮಾಡ್ತಿದ್ದಾರೆ. ನಾವು ಚುನಾವಣೆ ಸಂದರ್ಭದಲ್ಲಿ ಸುಮ್ಮನಿದ್ದೆವು. ಅವರ ನಡುವೆ ಎಷ್ಟೇ ಗುಂಪು ಆಗಲಿ. ನಮ್ಮದು ಮಾತ್ರ ಒಂದೇ ಗುಂಪು ಎಂದು ಹೇಳಿದ್ದಾರೆ.