ನವದೆಹಲಿ: ದೇಶದ ಅಭಿವೃದ್ಧಿ ಮತ್ತು ಪ್ರಗತಿಗೆ ಉತ್ತಮ ಮೂಲಸೌಕರ್ಯ ಮುಖ್ಯವಾಗಿದೆ. ಕಾಂಗ್ರೆಸ್ ಬರೀ ದೇಶದ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ನಾವು ಸಂವಿಧಾನವನ್ನು ಬದಲಾಯಿಸುವವರಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಸಂವಾದ ಒಂದರಲ್ಲಿ ಮಾತನಾಡಿದ ಅವರು, ದೆಹಲಿ ಮತ್ತು ಡೆಹ್ರಾಡೂನ್ ನಡುವಿನ ಹಳೆಯ ಹೆದ್ದಾರಿಯನ್ನು ಪುನರ್ನಿರ್ಮಿಸಿದ್ದೇವೆ. ಯಾತ್ರಿಕರ ಸಂಖ್ಯೆಯನ್ನು 2.5 ಪಟ್ಟು ಹೆಚ್ಚಿಸಿದೆ. ಇದು ಟ್ಯಾಕ್ಸಿಗಳು, ಬಸ್ಸುಗಳು, ರೆಸ್ಟೋರೆಂಟ್ ಗಳು ಮತ್ತು ಹೋಟೆಲ್ಗಳ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸಿ, ಉದ್ಯೋಗ ಸೃಷ್ಟಿಗೆ ಕಾರಣವಾಯಿತು ಎಂದಿದ್ದಾರೆ.
ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಪ್ರವೇಶ ನಿಯಂತ್ರಣ ಹಸಿರು ಎಕ್ಸ್ಪ್ರೆಸ್ ಹೆದ್ದಾರಿಯನ್ನು ನಿರ್ಮಿಸಿದ್ದೇವೆ ಮತ್ತು ಪ್ರಸ್ತುತ ರಸ್ತೆಗಳ ಸಾಮರ್ಥ್ಯವನ್ನು ಹೆಚ್ಚಿಸಿದ್ದೇವೆ. ಪೆಟ್ರೋಲ್ ಮತ್ತು ಡೀಸೆಲ್ ಬದಲಿಗೆ ಜೈವಿಕ ಇಂಧನ ಮತ್ತು ಪರ್ಯಾಯ ಇಂಧನಕ್ಕೆ ಆದ್ಯತೆ ನೀಡಲಾಗುತ್ತಿದೆ. ಆದ್ದರಿಂದ ನಾವು ಎಥೆನಾಲ್, ಮೆಥನಾಲ್, ಜೈವಿಕ-ಡೀಸೆಲ್, ಜೈವಿಕ-ಎಲ್ಎನ್ಜಿ, ಜೈವಿಕ-ಸಿಎನ್ಜಿ, ಎಲೆಕ್ಟ್ರಿಕ್ ಮತ್ತು ಹೈಡ್ರೋಜನ್ ನ್ನು ಪ್ರೋತ್ಸಾಹಿಸಿದ್ದೇವೆ ಎಂದಿದ್ದಾರೆ.
ದೇಶವು ಮಾಲಿನ್ಯಕ್ಕೆ ಕಾರಣವಾಗುವ 22 ಲಕ್ಷ ಕೋಟಿ ರೂ. ಮೌಲ್ಯದ ಪಳೆಯುಳಿಕೆ ಇಂಧನವನ್ನು ಆಮದು ಮಾಡಿಕೊಳ್ಳುತ್ತದೆ ಎಂದಿದ್ದಾರೆ.