ಮಂಡ್ಯ ; ಚಲಿಸುತ್ತಿದ್ದ ಬೈಕಿಗೆ ಪೊಲೀಸರು ಅಡ್ಡ ಬಂದ ಪರಿಣಾಮ ಬೈಕ್ನಿಂದ 3 ವರ್ಷದ ಮಗು ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಮಂಡ್ಯದ ಸ್ವರ್ಣಸಂದ್ರದ ಬಳಿ ನಡೆದಿದೆ. ಮಂಡ್ಯದ ಮದ್ದೂರಿನ ಗೊರವನಹಳ್ಳಿ ಗ್ರಾಮದ ರಿತೀಕ್ಷ ಮೃತ ದುರ್ದೈವಿ. ಗ್ರಾಮದಿಂದ ಇಂದು ಮಂಡ್ಯಕ್ಕೆ ಪೋಷಕರ ಜೊತೆ ಬೈಕ್ನಲ್ಲಿ ಬರುವ ವೇಳೆ ಸ್ವರ್ಣ ಸಂದ್ರದ ಬಳಿ ಫೈನ್ ಹಾಕಲು ಪೊಲೀಸರು ನಿಂತಿದ್ದಾರೆ.
ಈ ವೇಳೆ ರಿತೀಕ್ಷಾ ಇದ್ದ ಬೈಕಿಗೆ ಪೊಲೀಸರು ಅಡ್ಡ ಬಂದಿದ್ದಾರೆ. ಈ ವೇಳೆ ನಿಯಂತ್ರಣ ತಪ್ಪಿ ಬೈಕ್ನಿಂದ ರಿತೀಕ್ಷ ಕೆಳಗೆ ಬಿದ್ದಿದ್ದಾಳೆ. ತಲೆಗೆ ತ್ರೀವ್ರ ಪೆಟ್ಟಾದ ಹಿನ್ನೆಲೆ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ಇನ್ನು ಪೊಲೀಸರ ವರ್ತನೆಗೆ ಕುಟುಂಬಸ್ಥರ ಆಕ್ರೋಶ ವ್ಯಕ್ತಪಡಿಸಿ ಮಂಡ್ಯ ಮಿಮ್ಸ್ ಆಸ್ಪತ್ರೆ ಮುಂದೆ ಮಗು ಇಟ್ಟು ಪ್ರತಿಭಟನೆ ನಡೆಸಿದ್ದಾರೆ. ಸ್ಥಳದಲ್ಲಿ ಈಗ ಬಿಗುವಿನ ವಾತವಾರಣ ನಿರ್ಮಾಣವಾಗಿದೆ.