ಶ್ರೀನಗರ: ಪಾಕ್ ಗಡಿಯಲ್ಲಿ ಮತ್ತೆ ತನ್ನ ಕುತಂತ್ರ ಬುದ್ಧಿ ಮುಂದುವರೆಸಿದ್ದು, ಗಡಿಯಲ್ಲಿ ಮತ್ತೆ ಕದನ ವಿರಾಮ ಉಲ್ಲಂಘಿಸಿದೆ.
ಜಮ್ಮು, ಪೂಂಚ್, ಉರಿ, ಕುಪ್ವಾರಾ ಜಿಲ್ಲೆಯ ಜಿಲ್ಲೆಯ ಕರ್ನಾ ಮತ್ತು ತಂಗ್ಧರ್ ವಲಯಗಳಲ್ಲಿ ದಾಳಿ ನಡೆಸಿಸುತ್ತಿದೆ. ಸೇರಿದಂತೆ ಹಲವೆಡೆ ಇಂದು ಸಂಜೆ ಶೆಲ್ ದಾಳಿಯ ಮೂಲಕ ವಿಫಲ ಯತ್ನ ನಡೆಸಿದೆ. ಭಾರತೀಯ ಸೇನೆ ಮಾತ್ರ ಇದಕ್ಕೆ ತಕ್ಕ ಉತ್ತರ ನೀಡಿದೆ. ಜಮ್ಮುವಿನ ಉರಿ ಪ್ರದೇಶದ ನಿಯಂತ್ರಣ ರೇಖೆ ಮತ್ತು ಅಂತಾರಾಷ್ಟ್ರೀಯ ಗಡಿಯಲ್ಲಿ ಭಾರೀ ಶೆಲ್ ದಾಳಿ ಆರಂಭಿಸಿದೆ.
ವಾಯು ಪಡೆ ಪಾಕಿಸ್ತಾನದ ಡ್ರೋನ್ ಹಾಗೂ ಕ್ಷಿಪಣಿಗಳನ್ನು ಹೊಡೆದುರುಳಿಸಿದೆ. ಹೀಗಾಗಿ ವಾಯು ನೆಲೆಯ ಸೈರನ್ ಮೊಳಗಿವೆ. ಉರಿ ವಲಯದಲ್ಲಿ ಪಾಕಿಸ್ತಾನ ನಡೆಸಿದ ದಾಳಿಗೆ ಓರ್ವ ಮಹಿಳೆ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ.