ಇಸ್ಲಾಮಾಬಾದ್: ಜಮ್ಮು-ಕಾಶ್ಮೀರದ ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತವು ಪಾಕಿಸ್ತಾನದ ವಿರುದ್ಧ ಸತತ ನಾಲ್ಕು ದಿನ “ಆಪರೇಷನ್ ಸಿಂಧೂರ” ಅಡಿಯಲ್ಲಿ ದಾಳಿ ನಡೆಸಿದೆ. ಭಾರತದ ದಾಳಿಗೆ ಬೆಚ್ಚಿಬಿದ್ದ ಪಾಕಿಸ್ತಾನವು ಅಮೆರಿಕದ ಎದುರು ಅಂಗಲಾಚಿ ಕದನವಿರಾಮ ಘೋಷಣೆ ಮಾಡಿದೆ. “ನಮ್ಮ ದೇಶದ ವಾಯುನೆಲೆಗಳನ್ನು ಭಾರತ ಧ್ವಂಸಗೊಳಿಸಿದೆ” ಎಂದು ಖುದ್ದು ಪಾಕಿಸ್ತಾನ ಪ್ರಧಾನಿಯೇ ಹೇಳಿದ್ದಾರೆ. ಹಾಗಾದರೆ, ನಾಲ್ಕು ದಿನ ಭಾರತ ಹೇಗೆ ದಾಳಿ ಮಾಡಿತು? ಇದರಿಂದ ಪಾಕಿಸ್ತಾನಕ್ಕೆ ಆದ ಹಾನಿ ಏನು? ಇಲ್ಲಿದೆ ವಿವರ.
• ಏಪ್ರಿಲ್ 22ರ ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಮೇ 7ರಂದು ಭಾರತ ದಾಳಿ. ಪಾಕಿಸ್ತಾನ ಹಾಗೂ ಪಿಒಕೆಯ 9 ಉಗ್ರರ ನೆಲೆಗಳ ಉಡೀಸ್
• ಭಾರತದ ದಾಳಿಯಲ್ಲಿ 100ಕ್ಕೂ ಅಧಿಕ ಉಗ್ರರ ಸಾವು. ಲಷ್ಕರೆ ತಯ್ಬಾ ಮುಖ್ಯಸ್ಥ ಹಫೀಜ್ ಸಯೀದ್ ನ 10 ಸಂಬಂಧಿಕರ ಹತ್ಯೆ.
• ರಾಫೆಲ್ ಯುದ್ಧವಿಮಾನದ ಮೂಲಕ ಪಾಕ್ ನೆಲೆಗಳ ಮೇಲೆ ಸ್ಕಾಲ್ಪ್ ಕ್ರೂಸ್ ಕ್ಷಿಪಣಿಗಳು ಮತ್ತು ಹ್ಯಾಮರ್ ಸ್ಮಾರ್ಟ್ ಬಾಂಬ್ಗಳ ಮೂಲಕ ದಾಳಿ. M777 ಹೊವಿಟ್ಜರ್ ಗಳ ದಾಳಿಗೆ ಪಾಕಿಸ್ತಾನ ಕಂಗಾಲು.
• ಪಾಕಿಸ್ತಾನದ ಲಾಹೋರ್ ಮತ್ತು ಕರಾಚಿಯಲ್ಲಿನ ಹಲವು ವಾಯು ನೆಲೆಗಳ ಮೇಲೆ ಭಾರತ ದಾಳಿ, ವಾಯುನೆಲೆಗಳು ಪುಡಿಪುಡಿ
• ಪಾಕಿಸ್ತಾನದ ಡ್ರೋನ್ ದಾಳಿಗಳನ್ನು ಎದುರಿಸುವಲ್ಲಿ ಭಾರತ ಸಫಲ. ರಷ್ಯಾ ನಿರ್ಮಿತ ಎಸ್-400 ಕ್ಷಿಪಣಿ ವ್ಯವಸ್ಥೆ ಮೂಲಕ ಪಾಕಿಸ್ತಾನದ 500-600 ಡ್ರೋನ್ ಗಳ ಉಡೀಸ್
• ದೇಶೀಯವಾಗಿ ನಿರ್ಮಿಸಿದ ಆಕಾಶ್ ಕ್ಷಿಪಣಿಗಳು, ಬರಾಕ್ 8 ವಾಯು ರಕ್ಷಣಾ ವ್ಯವಸ್ಥೆ ಮೂಲಕವೂ ಪಾಕಿಸ್ತಾನದ ಡ್ರೋನ್ ಗಳ ಧ್ವಂಸ
• ಪಾಕಿಸ್ತಾನದ ರಫೀಕಿ, ಮುರಿದ್, ಚಕ್ಲಾಲಾ, ರಹೀಮ್ ಯಾರ್ ಖಾನ್, ಸುಕ್ಕೂರ್, ಚುನಿಯನ್, ಪಸ್ರೂರ್ ಸೇರಿ ಎಂಟು ವಾಯುನೆಲೆಗಳನ್ನು ಪುಡಿಗಟ್ಟಿದ ಭಾರತದ ವಾಯುಪಡೆ
• ಸ್ಕಾರ್ಡು, ಸರ್ಗೋಧಾ, ಜಕೋಬಾಬಾದ್ ಮತ್ತು ಭೋಲಾರಿಯ ಪಾಕ್ ವಾಯುನೆಲೆಗಳಿಗೆ ಭಾರಿ ಪ್ರಮಾಣದ ಹಾನಿ