ಬೆಂಗಳೂರು : ನಗರದ ನಾಯಂಡಹಳ್ಳಿ ಪ್ಲಾಸ್ಟಿಕ್ ಗೋದಾಮಿನಲ್ಲಿ ಭೀಕರ ಅಗ್ನಿ ಅನಾಹುತ ಸಂಭವಿಸಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟ ಪ್ರಸಂಗ ನಡೆದಿದೆ.
ವೃಷಭಾವತಿ ನದಿ ಪಕ್ಕದಲ್ಲಿರುವ ಈ ಗೋದಾಮಿನಲ್ಲಿ ಟನ್ಗಟ್ಟಲೆ ಸ್ಕ್ರಾಪ್ ಪ್ಲಾಸ್ಟಿಕ್, ಹಳೆಯ ಪೈಪ್ಗಳು ಹಾಗೂ ಇತರೆ ಪ್ಲಾಸ್ಟಿಕ್ ವಸ್ತುಗಳನ್ನು ಸಂಗ್ರಹಿಸಲಾಗಿತ್ತು. ಇದು ಬೆಂಕಿ ಹರಡಲು ಮುಖ್ಯ ಕಾರಣವಾಗಿದೆ.
ಪ್ಲಾಸ್ಟಿಕ್ನಿಂದಾಗಿ ಬೆಂಕಿಯ ತೀವ್ರತೆ ಹೆಚ್ಚಾಗಿದ್ದು, ದಟ್ಟ ಹೊಗೆ ಇಡೀ ನಾಯಂಡಹಳ್ಳಿ ಪ್ರದೇಶವನ್ನು ಆವರಿಸಿತ್ತು. ಈ ಅಗ್ನಿ ಅನಾಹುತದಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಕಿಡಿಗೇಡಿಗಳ ಕೃತ್ಯದಿಂದ ಅಥವಾ ಬಿಸಿಲಿನ ತಾಪಕ್ಕೆ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಶ್ವಾಸಕೋಶದಲ್ಲಿ ರಕ್ತ ಹೆಪ್ಪುಗಟ್ಟಿದ್ದೇ ಪ್ರತೀಕ್ ಯಾದವ್ ಸಾವಿಗೆ ಕಾರಣ – ಮೃತ ದೇಹದಲ್ಲಿ 6 ಗಾಯಗಳು ಪತ್ತೆ


















