ನಿನ್ನೆ ಅಹಮದಾಬಾದ್ ಅಪಘಾತದ ಬಗ್ಗೆ ಮಾದ್ಯಮಗಳ ಮುಂದೆ ಸಿಎಂ ಸಿದ್ದರಾಮಯ್ಯ ಮಾತನಾಡುತ್ತಿದ್ದ ವೇಳೆ ಪಕ್ಕದಲ್ಲೇ ಇದ್ದ ಬಸವರಾಜ ರಾಯರೆಡ್ಡಿ ಗುಜರಾತ್ ಮಾಜಿ ಸಿಎಂ ಕೂಡಾ ಸಾವನಪ್ಪಿದ್ದಾರೆ ಎನ್ನುವ ಮಾಹಿತಿ ನೀಡುತ್ತಾರೆ.
ಕಣ್ಣೆದುರೇ ಮಾಧ್ಯಮಗಳಿದ್ದರೂ ಕನಿಷ್ಠ ಮೃತ ರುಪಾನಿಯವರಿಗೆ ಸಂತಾಪ ಸೂಚಿಸಲು ಮುಂದಾಗದ ಸಿಎಂ ತಾತ್ಸಾರ ಭಾವದಿಂದ ತೆರಳುತ್ತಾರೆ. ಸಿಎಂ ಸಂತಾಪ ಸೂಚಿಸೋ ಸಂದರ್ಭದಲ್ಲಿ ರುಪಾನಿಯವರ ಹೆಸರನ್ನು ಉಲ್ಲೇಖಿಸುವುದಿಲ್ಲ.
ಹೀಗಾಗಿ ಸಿದ್ದರಾಮಯ್ಯ ಮರೆತಿರಬಹುದು ಅಂತಾ ತಿಳಿದ ರಾಯರೆಡ್ಡಿ, ರುಪಾನಿಯವರ ದುರ್ಮರಣದ ಬಗ್ಗೆ ಮಾಹಿತಿ ನೀಡುತ್ತಾರೆ. ಆದರೆ, ಈ ಬಗ್ಗೆ ಮರಳಿ ಮಾತನಾಡಲು ಹಿಂದೇಟು ಹಾಕುವ ಸಿಎಂ ಓರ್ವ ಮೃತ ಮಾಜಿ ಸಿಎಂಗೆ ಗೌರವದ ಸಂತಾಪದ ಮಾತುಗಳನ್ನಾಡದೆ ಜರಿದು ಹೋಗಿದ್ದು ದುರಾದೃಷ್ಟವೇ ಸರಿ.