ಹಾಸನ: ಜಿಲ್ಲೆಯಲ್ಲಿ ಮನೆಗಳ್ಳತನ ಹೆಚ್ಚಾಗುತ್ತಿದ್ದು, ಜನರು ಆತಂಕದಲ್ಲಿ ಬದುಕು ಕಳೆಯುವಂತಾಗುತ್ತಿದೆ.
ಮೂವರು ಮುಸುಕುಧಾರಿಳು ಮನೆಗಳ್ಳತನಕ್ಕೆ ವಿಫಲ ಯತ್ನ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಹಾಸನ ತಾಲ್ಲೂಕಿನ ಶಾಂತಿಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಧ್ಯರಾತ್ರಿ ಎರಡು ಗಂಟೆ ಸಮಯದಲ್ಲಿ ಖದೀಮರು ಕಳ್ಳತನಕ್ಕೆ ಸಂಚು ಹಾಕಿ ಓಡಾಡಿದ್ದಾರೆ. ಮನೆಯೊಂದರ ಕಂಪೌಂಡ್ ಒಳಗೆ ಹೋಗಿ ಬರಿಗೈಯಲ್ಲಿ ಮತ್ತೆ ಹೊರಗೆ ಹೋಗಿದ್ದಾರೆ.
ಈ ಕಳ್ಳರ ಗ್ಯಾಂಗ್ ಮೂರು ಮನೆಗಳಲ್ಲಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿರುವುದು ಬೆಳಕಿಗೆ ಬಂದಿದೆ. ಮನೆಯ ಮುಂದೆ ನಿಲ್ಲಿಸಿದ್ದ ವಾಹನಗಳ ಕಳ್ಳತನಕ್ಕೂ ಯತ್ನ ನಡೆಸಿದ್ದಾರೆ. ಕಳ್ಳರ ಓಡಾಟದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಶಾಂತಿಗ್ರಾಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.


















