ನೂರು ಅಡಿ ಎತ್ತರದ ಮೇಲಿಂದ ಬಿದ್ದು ಸಾವನ್ನಪ್ಪಿದ ಸ್ನೇಹಿತನನ್ನು ಗುಟ್ಟಾಗಿ ಸುಟ್ಟು ಹಾಕಿದ ಇಬ್ಬರು ಸ್ನೇಹಿತರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಘಟನೆ ಪುಣೆಯಲ್ಲಿ ನಡೆದಿದೆ. 100 ಅಡಿ ಎತ್ತರ ವಿದ್ಯುತ್ ಟವರ್ ನಿಂದ ಬಿದ್ದು ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದ. ಆದರೆ, ಸ್ನೇಹಿತರು ಮಾತ್ರ ಕುಟುಂಬ ಅಥವಾ ಪೊಲೀಸರಿಗೆ ತಿಳಿಸದೆ ಇಬ್ಬರೇ ಸಮಾಧಿ ಮಾಡಿದ್ದಾರೆ. ನಿಷ್ಕ್ರಿಯಗೊಂಡ ಹೈಟೆನ್ಷನ್ ವಿದ್ಯುತ್ ಟವರ್ ನಿಂದ ಲೋಹದ ಕೇಬಲ್ ನ್ನು ಕದಿಯಲು ಮೂವರು ಪ್ರಯತ್ನಿಸುತ್ತಿದ್ದರು ಎನ್ನಲಾಗಿದೆ. ಈ ವೇಳೆ ಬಸವರಾಜ ಮಂಗ್ರುಳೆ (22) ಮೇಲಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ. ಆತ ಪುಣೆಯ ಸಿನ್ಹಗಡ್ ರಸ್ತೆಯ ನಿವಾಸಿ. ಆರೋಪಿಗಳನ್ನು ಸೌರಭ್ ರೇಣುಸೆ ಮತ್ತು ರೂಪೇಶ್ ಯೆನ್ಪುರೆ ಎಂದು ಗುರುತಿಸಲಾಗಿದೆ.
ಮಂಗ್ರುಳೆ, ರೆಣುಸೆ ಮತ್ತು ಯೆನ್ಪುರೆ ಲೋಹದ ಕೇಬಲ್ಗಳನ್ನು ಕದಿಯಲು ರಂಜನೆ ಗ್ರಾಮಕ್ಕೆ ತೆರಳಿದ್ದರು. ಆ ವೇಳೆ ಟವರ್ ಮೇಲಿಂದ ಬಿದ್ದು ಮಂಗ್ರುಳೆ ಸಾವನ್ನಪ್ಪಿದ್ದಾನೆ. ಆದರೆ, ಆರೋಪಿಗಳು ಆತನನ್ನು ಆಸ್ಪತ್ರೆಗೆ ದಾಖಲಿಸುವ ಬದಲು ಪಾಬೆ ಅರಣ್ಯದಲ್ಲಿ ಹೂತು ಹಾಕಿದ್ದಾರೆ ಎಂದು ಸಿನ್ಹಗಡ್ ರೋಡ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.