ಕೊಲೆ ಆರೋಪದಲ್ಲಿ ನಟ ದರ್ಶನ್ (Darshan) ಅರೆಸ್ಟ್ ಆಗಿರುವುದು ಹಲವರಿಗೆ ಆಘಾತ ತಂದಿದೆ. ಈ ಮಧ್ಯೆ ಹಲವು ಫ್ಯಾನ್ಸ್ ಬೆಂಬಲ ಸೂಚಿಸುತ್ತಿದ್ದು, ನಟಿ ಉಮಾಶ್ರೀ ಬೇಸರ ವ್ಯಕ್ತಪಡಿಸಿದ್ದಾರೆ.
ಚಿತ್ರದುರ್ಗದ ರೇಣುಕಾ ಸ್ವಾಮಿ (Renuka Swamy) ಹತ್ಯೆಯಲ್ಲಿ ದರ್ಶನ್ ಮತ್ತು ಸಹಚರರ ಕೈವಾಡ ಇದೆ ಎಂಬ ಆರೋಪದಲ್ಲಿ ತನಿಖೆ ನಡೆಯುತ್ತಿದೆ. ಇಂತಹ ಗಂಭೀರ ಆರೋಪ ಇದ್ದರೂ ಹಲವು ಅಭಿಮಾನಿಗಳು ನಟನಿಗೆ ಬೆಂಬಲ ಸೂಚಿಸುತ್ತಿದ್ದಾರೆ. ದರ್ಶನ್ ಪರವಾಗಿ ಕೆಲವು ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ. ಇಂತಹ ವ್ಯಕ್ತಿಗಳ ಮನಸ್ಥಿತಿ ಕುರಿತು ಹಿರಿಯ ನಟಿ ಮಾತನಾಡಿದ್ದಾರೆ.
ಒಂದು ನಂಬಿಕೆ ಎನ್ನುವುದು ಇರುತ್ತದೆ. ನಾವು ಆರಾಧಿಸುವ, ಪೂಜಿಸುವ ವ್ಯಕ್ತಿಗಳ ಬಗ್ಗೆ ಆ ನಂಬಿಕೆ ಯಾವಾಗಲೂ ಇರುತ್ತೆ. ಜೊತೆಯಲ್ಲಿ ಕೆಲಸ ಮಾಡಿದ ನಮಗೂ ಹಾಗೆ ಅನಿಸುತ್ತದೆ. ನಾನು ಕೂಡ ಹಾಗೆ ಭಾವಿಸಿದ್ದೆ. ತುಂಬ ಒಳ್ಳೆಯ ಹುಡುಗ, ಯಾಕೆ ಹೀಗೆ ಆಯ್ತೋ ಗೊತ್ತಿಲ್ಲ ಅಂತ. ಆ ನಂಬಿಕೆಯಿಂದಲೇ ಎಲ್ಲರೂ ಆ ರೀತಿ ಪ್ರತಿಕ್ರಿಯೆ ನೀಡುತ್ತಾರೆ. ತಪ್ಪು ಅಂತ ನಾವಾಗಲೀ, ನೀವಾಗಲೀ ಹೇಳೋಕೆ ಆಗಲ್ಲ’ ಎಂದಿದ್ದಾರೆ ಉಮಾಶ್ರೀ.