ಬಳ್ಳಾರಿ: ಕ್ಷುಲಕ ಕಾರಣಕ್ಕೆ ಯುವಕರ ಗುಂಪೊಂದು ಹೋಟೆಲ್ ಸೆಕ್ಯುರಿಟಿ ಹಾಗೂ ಸಿಬ್ಬಂದಿ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿರುವ ಘಟನೆ ಬಳ್ಳಾರಿ ನಗರದ ಪಿಸ್ತಾ ಹೋಟೆಲ್ನಲ್ಲಿ ನಡೆದಿದೆ.
ತಡ ರಾತ್ರಿ 11:20 ರ ಸುಮಾರಿಗೆ ಏಕಾಏಕಿ ಸೆಕ್ಯುರಿಟಿ ಗಾಡ್೯ & ಹೊಟೇಲ್ ಸಿಬ್ಬಂದಿ ಮೇಲೆ ಹಲ್ಲೆಮಾಡಲಾಗಿದೆ. ಸಹೀರ್ ಎಂಬಾತ ರಾತ್ರಿ 10:30 ಕ್ಕೆ ಊಟ ಪಾಸ್೯ ಕೊಡುವುದಕ್ಕೆ ಆಡ್೯ರ್ ಮಾಡಿದ್ದ. ಪಾಸ್೯ಲ್ ಕಟ್ಟೋದು ತಡವಾಯಿತು ಎಂಬ ಕಾರಣಕ್ಕೆ ಹೊಟೇಲ್ ಸಿಬ್ಬಂದಿ ಮತ್ತು ಇತನ ನಡುವೆ ವಾಗ್ವಾದ ಶುರುವಾಗಿದೆ.
ಈ ವೇಳೆ ವಾಗ್ವಾದ ತಡೆಯಲು ಬಂದ ಸೆಕ್ಯುರಿಟಿ ಗಾಡ್೯ ಮಲ್ಲಿಕಾರ್ಜುನ ಮೇಲೆ ಯುವಕರ ಗುಂಪು ಏಕಾಏಕಿ ಹಲ್ಲೆ ಮಾಡಿದೆ. ಯುವಕರ ಅಟ್ಟಹಾಸ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸದ್ಯ ಈ ಘಟನಾ ಸಂಬಂಧ ಸಹೀರ್, ಮೇಹಬೂಬ್ ಸೇರಿದಂತೆ ಆರು ಜನರ ವಿರುದ್ಧ ಬಳ್ಳಾರಿ ಕೌಲಬಜಾರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗದೆ.
ಇದನ್ನೂ ಓದಿ ; ಮೂಕಪ್ರಾಣಿಗಳಿಗೂ ಗ್ಯಾಸ್ ಟ್ರಬಲ್!/



















