ಬೆಂಗಳೂರು: ಮಧ್ಯಪ್ರಾಚ್ಯ ಯುದ್ಧದ ಹಿನ್ನೆಲೆ ದೇಶದೆಲ್ಲಡೆ ಗ್ಯಾಸ್ ಅಭಾವ ಉಂಟಾಗಿದ್ದು, ಇದೀಗ ಪ್ರಾಣಿಗಳಿಗೂ ಗ್ಯಾಸ್ ಸಮಸ್ಯೆಯ ಬಿಸಿ ತಟ್ಟಿದೆ.
ಬೆಂಗಳೂರು ಹೊರವಲಯದ ಕಗ್ಗಲೀಪುರದಲ್ಲಿ ಇರುವ ಪ್ರಾಣಿ ಆಶ್ರಮದಲ್ಲಿ ಸಿಲಿಂಡರ್ ಸಿಗದ ಹಿನ್ನೆಲೆ ಟ್ರಸ್ಟ್ ಸಿಬ್ಬಂದಿಗಳು ಸೌದೆ ಒಲೆ ಬಳಕೆ ಮಾಡಿ ಆಹಾರ ತಯಾರಿಕೆ ಮಾಡುತ್ತಿದ್ದಾರೆ.
ಅಪೂರ್ವ ಟ್ರಸ್ಟಿನಲ್ಲಿ ಪ್ರಾಣಿಗಳಿಗೆ ಆಹಾರ ಬೇಯಿಸೋದಕ್ಕೂ ಹರಸಾಹಸ ಪಡುವಂತಾಗಿದ್ದು, ಪ್ರಾಣಿಗಳ ಆಶ್ರಮದಲ್ಲಿ ಗ್ಯಾಸ್ ಸಮಸ್ಯೆ ಹಿನ್ನೆಲೆ ಗ್ಯಾಸ್ಗಾಗಿ ಸಿಬ್ಬಂದಿಗಳು ಮನವಿ ಮಾಡಿದ್ದಾರೆ. ಗ್ಯಾಸ್ ನೀಡುವ ಮೂಲಕ ಮೂಕ ಜೀವಿಗಳಿಗೆ ಕೈಲಾದ ಸಹಾಯ ಮಾಡಿ, ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ :ಗಲ್ಫ್ ರಾಷ್ಟ್ರಗಳಲ್ಲಿ ವಾರ್ : ಕೊಪ್ಪಳದಲ್ಲಿ ಆಟೋ ಗ್ಯಾಸ್ ಬಂಕ್ಗಳು ಬಂದ್



















