ಕಲಬುರಗಿ : ಕಲಬುರಗಿ ಜಿಲ್ಲೆ ಪೊಲೀಸರ ಭರ್ಜರಿ ಕಾರ್ಯಾಚರಣೆಯಿಂದ ಕಳ್ಳತನವನ್ನೇ ವೃತ್ತಿ ಮಾಡಿಕೊಂಡಿದ್ದ ಖದೀಮರನ್ನು ಬಂಧಿಸಲಾಗಿದೆ.
ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಝಳಕಿ ತಾಂಡಾ ಮತ್ತು ಕಂಸರನಾಯಕ್ ತಾಂಡಾ ನಿವಾಸಿಗಳಾದ ಕರಣ್ ಪವಾರ್ ಮತ್ತು ರಾಮದಾಸ ಚವ್ಹಾಣ್ ಬಂಧಿತ ಮನೆಗಳ್ಳರು. ಆರೋಪಿ ಕರಣ್ ಮತ್ತು ರಾಮದಾಸ್ ಸೇರಿ ಐವರು ಖದೀಮರ ಗ್ಯಾಂಗ್, ಕಲಬುರಗಿ ಸೇರಿ ಅಕ್ಕಪಕ್ಕದ ಜಿಲ್ಲೆಗಳಿಗೆ ಹಾಗೂ ಪಕ್ಕದ ರಾಜ್ಯಗಳಿಗೆ ಹೋಗಿ ಮನೆಗಳ್ಳತನ ಮಾಡುತ್ತಿದ್ದರು.
ಮನೆಗಳಿಗೆ ಕನ್ನಹಾಕೋದೆ ಫುಲ್ ಟೈಂ ವೃತ್ತಿ ಮಾಡಿಕೊಂಡಿರುವ ಗ್ಯಾಂಗ್. ಮನೆಕಳ್ಳತನ ಮಾಡಿ ಮೋಜು ಮಸ್ತಿ, ಐಷಾರಾಮಿ ಜೀವನ ನಡೆಸ್ತಿದ್ದರು. ಕಲಬುರಗಿ ಜಿಲ್ಲೆ ಪೊಲೀಸರಿಗೆ ತಲೆನೋವಾಗಿದ್ದ ಕಳ್ಳರ ಗ್ಯಾಂಗ್, ಸಧ್ಯ ವಿಶೇಷ ತಂಡ ರಚನೆ ಮಾಡಿ ಇಬ್ಬರು ಕಳ್ಳರ ಹೆಡೆಮುರಿ ಕಟ್ಟಿದ್ದಾರೆ. ಇನ್ನುಳಿದ ಮೂವರು ಕಳ್ಳರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಬಂಧಿತ ಆರೋಪಿಗಳಿಂದ 26 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ, ಬೆಳ್ಳಿ ಆಭರಣಗಳು ಜಪ್ತಿ ಮಾಡಲಾಗಿದ್ದು, ಕಲಬುರಗಿ ಜಿಲ್ಲೆಯ ಸೇಡಂ, ಮಳಖೇಡ, ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ದ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ | ಪಿಂಕ್ ಲೈನ್ಗೆ ಬಂದೇ ಬಿಡ್ತು ಮೂರನೇ ರೈಲು



















