ಹಾಸನ : ಹಾಸನದಲ್ಲಿ ಭಾರೀ ಮೊತ್ತದ ಎಟಿಎಂ ಹಣ ದುರುಪಯೋಗ ಮಾಡಿಕೊಂಡ ಪ್ರಕರಣ ಬೆಳಕಿಗೆ ಬಂದಿದೆ. ಎಟಿಎಂಗೆ ಹಣ ತುಂಬುವ CMS ಸಂಸ್ಥೆಯ ಸಿಬ್ಬಂದಿಯಿಂದಲೇ ಕೋಟಿ ಕೋಟಿ ಹಣ ದೋಚಿರುವ ಆರೋಪ ಕೇಳಿಬಂದಿದೆ.
ಬರೊಬ್ಬರಿ 3.40 ಕೋಟಿ ರೂ. ನಾಪತ್ತೆಯಾಗಿದ್ದು, ಫೆ.18-19 ರಂದು ಆಡಿಟ್ ಮಾಡಿದಾಗ ಈ ಹಣ ದುರುಪಯೋಗವಾಗಿರುವುದು ಬೆಳಕಿಗೆ ಬಂದಿದೆ.
ಸಂಸ್ಥೆಯ ಸಿಬ್ಬಂದಿಗಳಾದ ನಂದೀಶ್ ಬಿ.ಎಲ್ ಹಾಗೂ ಮಧುಕುಮಾರ್.ಎಂ.ಪಿ ವಿರುದ್ಧ 18 ಎಟಿಎಂಗಳಿಗೆ ಹಾಕಬೇಕಾದ ಹಣ ಹಾಕಿದಂತೆ ದಾಖಲೆ ಸೃಷ್ಟಿ ಮಾಡಿ ಹಣ ಲಪಟಾಯಿಸಿರೊ ಆರೋಪ ಮಾಡಲಾಗಿದೆ.
ಸಿಎಂಎಸ್ ಸಂಸ್ಥೆಯ ಹಾಸನ ಬ್ರಾಂಚ್ ಮ್ಯಾನೇಜರ್ ರಾಜು ಎಂಬುವವರು ನೀಡಿದ ದೂರನ್ನು ಆಧರಿಸಿ ಹಾಸನ ಬಡಾವಣೆ ಠಾಣೆಯಲ್ಲಿ ಈ ಸಂಬಂಧ ಬಿಎನ್ಎಸ್ 316 (4) 318(4), 3 (5) ಅಡಿ ಪ್ರಕರಣ ದಾಖಲಾಗಿದೆ. ಎಫ್ ಐ ಆರ್ ದಾಖಲಿಸಿಕೊಂಡ ಹಾಸನ ಬಡಾವಣೆ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ಆಂಬ್ಯುಲೆನ್ಸ್ನಲ್ಲಿದ್ದ ಉಪಕರಣಗಳನ್ನು ಕದಿಯುತ್ತಿದ್ದ ಖದೀಮ ಅಂದರ್


















