ಧಾರವಾಡ : “KSRTC ನೌಕರರ ಪ್ರತಿಭಟನೆ ಕುರಿತು ಸಚಿವರು ಮಾತನಾಡುತ್ತಾರೆ. ಅವರ ಹೋರಾಟಕ್ಕೆ ನನ್ನ ಸಹಮತವಿದೆ. ಎಲ್ಲಾ ಸರ್ಕಾರಗಳ ಅವಧಿಯಲ್ಲೂ ಹೋರಾಟಗಳು ನಡೆಯುತ್ತವೆ” ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಸರ್ಕಾರದಲ್ಲಿ ಹುದ್ದೆಗಳ ನೇಮಕಾತಿ ಬಾಕಿ ಇರುವ ವಿಚಾರಕ್ಕೆ, “ಈಗಾಗಲೇ 50 ಸಾವಿರ ಹುದ್ದೆಗಳನ್ನು ತುಂಬಿದ್ದೇವೆ. ಒಳ ಮೀಸಲಾತಿ ಸೇರಿದಂತೆ ಕೋರ್ಟ್ ವಿಚಾರಗಳು ಬಗೆಹರಿದ ಮೇಲೆ ವಿಚಾರ ಮಾಡುತ್ತೇವೆ. ವಯೋಮಿತಿ ಹೆಚ್ಚಳ ವಿಚಾರ ಸರ್ಕಾರದ ಗಮನದಲ್ಲಿದೆ” ಎಂದು ತಿಳಿಸಿದ್ದಾರೆ.
ಶಾಸಕರು ಫಾರಿನ್ ಟೂರ್ ಹೋಗಿರುವ ಕುರಿತು ಬಿಜೆಪಿ ಟೀಕೆಗಳಿಗೆ ಪ್ರತಿಕ್ರಿಯಿಸುತ್ತಾ, “ಅವರು ಸರ್ಕಾರ ಮಾಡುವಾಗ ಎಲ್ಲಿಗೆ ಹೋಗಿದ್ದರು?. ಅವರ ಟೂರ್ ಬಗ್ಗೆ ಹೇಳಬೇಕಾ ನಿಮಗೆ? ಬೇರೆ ಯಾವುದೇ ವಿಷಯವಿಲ್ಲವೇ ಮಾತನಾಡಲು?. ಸರ್ಕಾರ ಅವರನ್ನು ಟೂರ್ಗೆ ಕಳುಹಿಸಿದೆ. ಅಲ್ಲಿಗೆ ಹೋಗಿ ಅವರೇನು ರಾಜಕಾರಣ ಮಾಡಲು ಸಾಧ್ಯ?. 20ರಿಂದ 30 ಜನ ಅಲ್ಲಿಗೆ ಹೋದರೂ ಸಹ ರಾಜಕಾರಣ ಮಾಡಲು ಆಗೋದಿಲ್ಲ, ಅಲ್ಲಿಗೆ ಹೋಗಿ ವೋಟ್ ಹಾಕುತ್ತಾರಾ? ಸರ್ಕಾರದಿಂದ ಅಥವಾ ವೈಯಕ್ತಿಕವಾಗಿ ಹೋಗಿದ್ದರ ಬಗ್ಗೆ ನನಗೆ ಮಾಹಿತಿ ಇಲ್ಲ” ಎಂದಿದ್ದಾರೆ.
ಇದನ್ನೂ ಓದಿ : ಪ್ರಿಯಾಂಕಾ ಗಾಂಧಿ ಜೊತೆ ಕಾಮಾಕ್ಯ ದೇಗುಲಕ್ಕೆ ಭೇಟಿ ನೀಡಿದ ಡಿಕೆಶಿ



















