ಬಿಗ್ಬಾಸ್ ಕನ್ನಡ ಸೀಸನ್ 12 ಮುಗಿದು ತಿಂಗಳು ಸಮೀಪಿಸುತ್ತಿದ್ದರೂ, ಅದರೊಳಗೆ ಹುಟ್ಟಿದ ವೈಮನಸ್ಸು ಮಾತ್ರ ಇನ್ನೂ ಮುಗಿದಂತೆ ಕಾಣುತ್ತಿಲ್ಲ. ಶೋ ಅಂತ್ಯವಾದ ಬಳಿಕವೂ ಸ್ಪರ್ಧಿಗಳ ನಡುವಿನ ಮಾತಿನ ಚಕಮಕಿ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಭುಗಿಲೆದ್ದಿದೆ. ಈ ಬಾರಿ ಮತ್ತೆ ಸುದ್ದಿಯಲ್ಲಿರುವುದು ಚೈತ್ರಾ ಕುಂದಾಪುರ ಮತ್ತು ಅಶ್ವಿನಿ ಗೌಡ ನಡುವಿನ ಹಳೆಯ ಜಗಳ.

ಹೌದು.. ಈ ಬಾರಿ ಬಿಗ್ಬಾಸ್ ಮನೆಗೆ ವಿಶೇಷ ಅತಿಥಿಗಳಾಗಿ ತೆರಳಿದ್ದ ಚೈತ್ರಾ ಕುಂದಾಪುರ ಮತ್ತು ರಜತ್ ಕಿಶನ್ ನಿಜವಾದ ಸ್ಪರ್ಧಿಗಳಂತೆಯೇ ಆಟವಾಡಿದ್ದರು. ಟಾಸ್ಕ್ ಸಂದರ್ಭದಲ್ಲಿ ಚೈತ್ರಾ ಕುಂದಾಪುರ ಅವರನ್ನು ಅಶ್ವಿನಿ ಗೌಡ ತಡೆದು ನಿಲ್ಲಿಸಬೇಕಿತ್ತು. ಈ ಆಟದಲ್ಲಿ ಚೈತ್ರಾ ಕುಂದಾಪುರ ನನ್ನ ಕೈಗಳಿಗೆ ಪರಚಿ ಚಿವುಟಿದ್ದಾರೆ ಎಂದು ಅಶ್ವಿನಿ ಗೌಡ ಆರೋಪಿಸಿದ್ದರು. ಆಟದಲ್ಲಿ ನಾನೇನು ಮಾಡಿಲ್ಲ ಎಂದು ವಾದಿಸಿದ ಚೈತ್ರಾ, ನಂತರ ಅಶ್ವಿನಿ ಗೌಡ ಬಳಿ ಕ್ಷಮೆಯನ್ನು ಸಹ ಕೇಳಿದ್ದರು. ಅಶ್ವಿನಿ ಗೌಡ ಸಹ ಕ್ಷಮಿಸಿರೋದಾಗಿ ಹೇಳಿ ಜಗಳಕ್ಕೆ ಪೂರ್ಣವಿರಾಮ ಇರಿಸಿದ್ದರು.

ಆದರೆ ತಮ್ಮ ಕೈ ಕಾಲುಗಳ ಮೇಲೆ ಉಗುರುಗಳಿಂದ ಆಗಿರುವ ಗಾಯದ ಫೋಟೋವನ್ನು ಅಶ್ವಿನಿ ಗೌಡ ಪೋಸ್ಟ್ ಮಾಡಿದ್ದಾರೆ. ಇದು ಚೈತ್ರಾ ಕುಂದಾಪುರ ಅವರೇ ಪರಚಿದ ಗಾಯಗಳು ಎಂದು ಜನರು ಕಮೆಂಟ್ ಮಾಡಿದ್ದಾರೆ. ಇದರ ನಡುವೆ ಅಶ್ವಿನಿ ಪೋಸ್ಟ್ಗೆ ಚೈತ್ರಾ ಕುಂದಾಪುರ ತಿರುಗೇಟು ನೀಡಿದ್ದಾರೆ. ನನಗೂ ದೇಹದ ಮೇಲೆ ಪರಚಿದ ಕಲೆಗಳಿವೆ. ಆದರೆ ಕ್ಷಮಿಸಿ ನನ್ನ ಬಳಿ ಯಾವುದೇ ಪಿಆರ್ ಟೀಮ್ ಇಲ್ಲ ಅಂತ ಕೌಂಟರ್ ಕೊಟ್ಟಿದ್ದಾರೆ.ಜೊತೆಗೆನಾನು ಆಟವನ್ನು ಆಟವಾಗಿಯೇ ನೋಡಿದ್ದೆ ಎಂದು ಹೇಳಿಕೊಂಡಿದ್ದಾರೆ.

ವಿವಾದ ಇಲ್ಲಿಯೇ ಮುಗಿಯಲಿಲ್ಲ. ಅಶ್ವಿನಿ ಗೌಡ ಪೋಸ್ಟ್ಗೆ ಜಾಹ್ನವಿ ಕಾಮೆಂಟ್ ಮಾಡಿ ಚೈತ್ರಾ ಕುರಿತು ಕಟುವಾಗಿ ಪ್ರತಿಕ್ರಿಯಿಸಿದ್ದಾರೆ. ಇದಕ್ಕೆ ಚೈತ್ರಾ ಕೂಡ ತಿರುಗೇಟು ನೀಡಿದ್ದು, ಕಾಮೆಂಟ್ ಬಾಕ್ಸ್ನಲ್ಲೇ ಜಾಹ್ನವಿ ಮತ್ತು ಚೈತ್ರಾ ನಡುವೆ ವಾಗ್ಧಾಳಿ ನಡೆದಿದೆ.


ಇದನ್ನೂ ಓದಿ : ಭಾರತ-ಅಮೆರಿಕ ವ್ಯಾಪಾರ ಒಪ್ಪಂದ | ಟ್ರಂಪ್ ‘ಶೂನ್ಯ ಸುಂಕ’ದ ಹೇಳಿಕೆಗೆ ಶ್ವೇತಭವನ ನೀಡಿದ ಸ್ಪಷ್ಟನೆ ಏನು?



















