ಬೆಂಗಳೂರು : ಗಂಡು ಮಗು ಆಗಲಿಲ್ಲ ಎಂದು ಪತ್ನಿಗೆ ಕೈ ಕೊಟ್ಟು ಪತಿ ಪರಾರಿಯಾಗಿರುವ ಘಟನೆ ಈಶಾನ್ಯ ವಿಭಾಗದ ವ್ಯಾಪ್ತಿಯಲ್ಲಿ ನಡೆದಿದೆ.
ರಾಜಸ್ಥಾನ ಮೂಲದವನಾಗಿರುವ ಹರೀಶ್ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದನು. ವರಲಕ್ಷ್ಮೀಯೊಂದಿಗೆ ಲವ್ ಕಂ ಅರೆಂಜ್ಡ್ ಮ್ಯಾರೇಜ್ ಆಗಿದ್ದ ಹರೀಶ್, ಮೂರು ಹೆಣ್ಣು ಮಕ್ಕಳನ್ನ ಪತ್ನಿ ಕೈಗಿಟ್ಟು ಮತ್ತೋರ್ವ ಮಹಿಳೆ ಜೊತೆ ಎಸ್ಕೇಪ್ ಆಗಿದ್ದಾನೆ. ಇತ್ತ ಒಂದುವರೆ ತಿಂಗಳ ಹಸಗೂಸನೊಂದಿಗೆ ಇಬ್ಬರು ಹೆಣ್ಣು ಮಕ್ಕಳನ್ನು ಮಡಲಲ್ಲಿ ಇಟ್ಟುಕೊಂಡು ಪತ್ನಿ ಕಣ್ಣೀರು ಹಾಕುತ್ತಿದ್ದಾಳೆ. ವರಲಕ್ಷ್ಮೀ ಖಾಸಗಿ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ನಿರ್ವಹಿಸುತ್ತಿದ್ದಾಳೆ.
ಕೆಲ ವರ್ಷಗಳ ಹಿಂದೆ ಇಬ್ಬರೂ ಪ್ರೀತಿಸಿ ಮದುವೆ ಆಗಿದ್ದು,ಈಗಾಗಲೇ ಇಬ್ಬರು ಹೆಣ್ಣುಮಕ್ಕಳು ಜನಿಸಿದ್ದರು. ಈ ಬಾರಿಯಾದರೂ ಗಂಡು ಮಗು ಆಗುವ ನಿರೀಕ್ಷೆಯಲ್ಲಿದ್ದ ಹರೀಶ್ಗೆ ನಿರಾಸೆ ಆಗಿ, ಮೂರನೇಯದ್ದು ಹೆಣ್ಣು ಮಗು ಜನಿಸಿತ್ತು. ಅಷ್ಟರಲ್ಲೇ ಮತ್ತೊಂದು ಮಹಿಳೆಯ ಜೊತೆ ಸಂಪರ್ಕ ಹೊಂದಿದ್ದು, ಆಕೆಯೊಂದಿಗೆ ಪರಾರಿಯಾಗಿದ್ದಾನೆ.
ಇತ್ತ ವರಲಕ್ಷ್ಮೀಗೆ ಮಕ್ಕಳ ಶಾಲೆ ಫೀಸ್, ಮನೆ ಬಾಡಿಗೆ ಹಸುಗೂಸನ್ನ ನೋಡಿಕೊಳ್ಳಲಾಗದೇ ಕಣ್ಣೀರು ಇಡುತ್ತಿದ್ದಾಳೆ. ಈ ಬಗ್ಗೆ ಒಂದು ತಿಂಗಳ ಹಿಂದೆ ಈಶಾನ್ಯ ವಿಭಾಗದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಆದರೆ ಪೊಲೀಸರು ಕೂಡ ಆತನನ್ನ ಕರೆಸಿಲಲ್ಲ ಎಂದು ಆರೋಪಿಸುತ್ತಿದ್ದಾಳೆ. ಬೇರೆ ಮಹಿಳೆ ಜೊತೆ ಇರುವ ಹರೀಶ್ ಡಿವೋರ್ಸ್ ಕೂಡ ಕೊಡದೇ ಇಬ್ಬರನ್ನು ನೋಡಿಕೊಳ್ಳುತ್ತೇನೆ ಎಂದು ಹೇಳುತ್ತಿದ್ದಾನೆ. ಸದ್ಯ ಪೋಲಿಸರು ಪ್ರಕರಣ ದಾಖಲಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಬರೋಬ್ಬರಿ 1,464 ಕೋಟಿ ಮೌಲ್ಯದ ನಕಲಿ ಬಿಲ್ ವಹಿವಾಟು | ಸರ್ಕಾರಕ್ಕೆ 355 ಕೋಟಿ ವಂಚಿಸಲು ಯತ್ನಿಸಿದ ನಾಲ್ವರ ಬಂಧನ!



















