ಬೆಂಗಳೂರು : ದುಡಿದ ಸಂಬಳ ಕೇಳಿದ ಆಂಬ್ಯೂಲೆನ್ಸ್ ಚಾಲಕನಿಗೆ ಸಂಬಳ ಕೊಡುತ್ತೀನಿ ಎಂದು ಕರೆಯಿಸಿ ಚಾಲಕನಿಗೆ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ನೈಸ್ ರಸ್ತೆಯಲ್ಲಿ ನಡೆದಿದೆ.
ಹಲ್ಲೆಗೊಳಗಾದ ಆಂಬ್ಯೂಲೆನ್ಸ್ ಚಾಲಕ ಕಿರಣ್. ಆಂಬ್ಯೂಲೆನ್ಸ್ ಮಾಲೀಕ ನಾಗರಾಜ್ ಹಾಗೂ ಮತ್ತೊಬ್ಬ ಚಾಲಕ ಮಂಜುನಾಥ್ ಎಂಬುವವರಿಂದ ಹಲ್ಲೆ. ಕಿರಣ್ 2 ತಿಂಗಳ ಸಂಬಳ ಕೊಡದ ಹಿನ್ನಲೆ ಕೆಲಸ ಬಿಟ್ಟಿದ್ದನು. ಖಾಸಗಿ ಆಸ್ಪತ್ರೆ ಆವರಣದಲ್ಲಿ ನಿನ್ನೆ ಗಲಾಟೆಯಾಗಿತ್ತು.
ಹಾಗೆಯೇ ಸಂಬಳ ಕೊಡೆಸುವುದಾಗಿ ಕರೆಸಿ ಚಾಲಕನ ಮೇಲೆ ಹಲ್ಲೆ ಮಾಡಿದ್ದಾರೆ. ಈ ವಿಡಿಯೋವನ್ನು ಮತ್ತೊಬ್ಬ ಆಂಬ್ಯೂಲೆನ್ಸ್ ಚಾಲಕ ಮೊಬೈಲ್ನಲ್ಲಿ ಸೆರೆಹಿಡಿದಿದ್ದಾನೆ. ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿ ರಾಜಿ ಸಂಧಾನ ಮಾಡಲಾಯಿತು.
ಇದನ್ನೂ ಓದಿ : ಬೆಂಗಳೂರಿನ ಈ ಪ್ರದೇಶಗಳಲ್ಲಿ ಜ.3ರಿಂದ 10ರವರೆಗೆ ಮಧ್ಯಂತರ ವಿದ್ಯುತ್ ವ್ಯತ್ಯಯ



















