ವಿಜಯನಗರ : ಯಾವುದೇ ರಾಜ್ಯದಿಂದ ಬಂದರೂ ನಮ್ಮವರು ಅನ್ನೋರು ಕನ್ನಡಿಗರು. ಕೇರಳ ಸರ್ಕಾರಕ್ಕೆ ಅಷ್ಟು ಸಮಸ್ಯೆಗಳಿವೆ, ಅವರೇನೂ ನಮಗೆ ಹೇಳ್ತಾರೆ ಎಂದು ಸಚಿವ ಬೈರತಿ ಸುರೇಶ್ ವಾಗ್ದಾಳಿ ನಡೆಸಿದ್ದಾರೆ.
ಹರಪನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಸಚಿವ ಬೈರತಿ ಸುರೇಶ್ ಮಾತನಾಡಿ, ಯಾವುದೇ ರಾಜ್ಯದಿಂದ ಬಂದರೂ ನಮ್ಮವರು ಅನ್ನೋರು ಕನ್ನಡಿಗರು. ಸಮಸ್ಯೆ ಆದವರಿಗೆ ತಾತ್ಕಾಲಿಕ ವ್ಯವಸ್ಥೆ ಮಾಡಿದ್ದೇವೆ. ಕೇರಳ ಸರ್ಕಾರದಿಂದ ಪಾಠ ಕಲಿಯುವ ಅವಶ್ಯಕತೆ ನಮಗಿಲ್ಲ, ವಿ ಆರ್ ಸ್ಟೇಬಲ್ ಎಂದು ಕೋಗಿಲು ಲೇಔಟ್ನಲ್ಲಿ ಅಕ್ರಮ ಒತ್ತುವರಿ ತೆರವು ವಿಚಾರದಲ್ಲಿ ಕೇರಳ ಸರ್ಕಾರ ಹಸ್ತಕ್ಷೇಪ ವಿಚಾರದ ಬಗ್ಗೆ ಆಕ್ರೋಶಿಸಿದ್ದಾರೆ.
ಕೆ.ಸಿ.ವೇಣುಗೋಪಾಲ ಯಾವುದೇ ರಾಜಕಾರಣ ಮಾಡಿಲ್ಲ, ಪಕ್ಷಾತೀತವಾಗಿ ಸಮಸ್ಯೆ ಆದವರಿಗೆ ಸಹಾಯ ಮಾಡಿ ಅಂದಿದ್ದಾರೆ. ಅವರು ನಮ್ಮ ಪಕ್ಷದ ಪ್ರಧಾನ ಕಾರ್ಯದರ್ಶಿ, ನಮಗೆ ಸಲಹೆ ನೀಡಿದ್ದಾರೆ. ಬಿಜೆಪಿಯವರಿಗೆ ದೆಹಲಿ ನಾಯಕರು ಇನ್ಸ್ಟ್ರಕ್ಷನ್ ಕೊಡ್ತಾರಲ್ಲ, ಅವರೇನು ಮೇಲಿಂದ ಇಳಿದು ಬಂದಿದ್ದಾ? ಎಂದು ಪ್ರಶ್ನಿಸಿದ್ದಾರೆ.
ಡ್ರಗ್ಸ್ ದಂಧೆ ವಿರುದ್ಧ ಮಹಾರಾಷ್ಟ್ರ ಪೊಲೀಸರ ವಿಚಾರಣೆ ವಿಚಾರ
ಸ್ಕಾಟ್ಲ್ಯಾಂಡ್ ಬಿಟ್ರೆ ಕರ್ನಾಟಕ ಪೊಲೀಸರೇ ಬೆಸ್ಟ್ ಪೊಲೀಸ್. ನಮ್ಮ ಪೊಲೀಸವರಿಗೆ ನೈತಿಕ ಸ್ಥೈರ್ಯ ಕುಗ್ಗಿಸುವ ನೀಚ ರಾಜಕಾರಣ ಮಾಡಬಾರದು. ನಮ್ಮ ಕರ್ನಾಟಕದ ಬೆಂಗಳೂರು ಪೊಲೀಸರು ಡ್ರಗ್ಸ್ ಕಚ್ಚಾ ವಸ್ತು ಹಿಡಿದಿರೋದು. ಫೋಟೋ ಇದ್ದ ಮಾತ್ರಕ್ಕೆ ದಾವಣಗೆರೆಯಲ್ಲಿ ಡ್ರಗ್ಸ್ ಕೇಸ್ನಲ್ಲಿ ಸಚಿವರ ಆಪ್ತರು ಬಂಧನ ಆಗಿದ್ದಾರೆ ಅಂತ ಹೇಳೋಕಾಗುತ್ತಾ? ಎಂದಿದ್ದಾರೆ.
ಸಿಎಂ ಬದಲಾವಣೆ ಚರ್ಚೆ ವಿಚಾರ
ಸಿಎಂ, ಡಿಸಿಎಂ ಬಗ್ಗೆ ಮಾತನಾಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ, ಹೈಕಮಾಂಡ್ನವರು ಸಿಎಂ ಬದಲಾವಣೆ ಬಗ್ಗೆ ನೋಡಿಕೊಳ್ಳುತ್ತಾರೆ. ಒಳಮೀಸಲಾತಿಯಲ್ಲಿ ಅನ್ಯಾಯ ಆಗಿದೆ ಎಂದು ಮಾಧ್ಯಮಗಳ ಪ್ರಶ್ನೆ ಒಳಮೀಸಲಾತಿ ಕೊಟ್ರೆ ಒಳ್ಳೆಯದಲ್ಲ ಏನ್ರಿ.. ಏನು ಅನ್ಯಾಯ ಆಗಿದೆ? ಸಮಾಜದ ಕಟ್ಟ ಕಡೆ ವ್ಯಕ್ತಿಗೂ ಒಳ್ಳೆಯದು ಮಾಡೋದು ಕಾಂಗ್ರೆಸ್ ಪಕ್ಷ ಎಂದಿದ್ದಾರೆ.
ಇದನ್ನೂ ಓದಿ : ದಾವಣಗೆರೆ | ಡ್ರಗ್ಸ್ ದಂಧೆಯಲ್ಲಿ ‘ಕೈ’ ಸಚಿವ ಜಮೀರ್ ಆಪ್ತ ಸೇರಿ ಮತ್ತೆ ನಾಲ್ವರ ಬಂಧನ



















