ರಾಮನಗರ : ಬೆಳೆಗಳ ನೀರಿಕ್ಷೆಯಲ್ಲಿರುವ ರೈತರಿಗೆ ಕಾಡಾನೆಗಳ ದಾಳಿ ತಲೆನೋವಾಗಿ ಪರಿಣಮಿಸಿದೆ. ಈ ವರ್ಷ ಅತೀವೃಷ್ಠಿ ಒಂದು ಕಡೆಯಾದರೇ ಮತ್ತೊಂದೆಡೆ ಕಾಡಾನೆಗಳ ಕಾಟ. ಆದಷ್ಟೂ ಮಾರಾಟ ಮಾಡಿ ಕೈಯಲ್ಲಿ ನಾಲ್ಕು ಕಾಸು ನೋಡುವ ತವಕದಲ್ಲಿದ್ದರಿ ಆದರೆ ಇವರ ಆಸೆಗೆ ಕಾಡಾನೆಗಳು ತಣ್ಣೀರೆರೆಚಿವೆ.
ರಾಮನಗರ ತಾಲೂಕಿನಲ್ಲಿ ಗಜಪಡೆಗಳ ದಾಂಧಲೆ ಮತ್ತೆ ಮುಂದುವರಿದಿದೆ. ಕಾಡಾನೆಗಳ ಹಿಂಡು ದಾಳಿ ಮಾಡಿ ರಾಗಿ, ಮಾವು ಬೆಳೆ ಹಾಗೂ ಪೈಪ್ ಲೈನ್ ನಾಶ ಪಡಿಸಿವೆ.
ಈ ಘಟನೆ ನೆಲಮಲೆ ಗ್ರಾಮದಲ್ಲಿ ನಡೆದಿದೆ. ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರ ತಾಲೂಕಿನ ಗ್ರಾಮಜಗದೀಶ್ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಬೆಳೆ ನಾಶವಾಗಿದೆ.
ಇದನ್ನೂ ಓದಿ : ‘ಸರ್ಕಾರಿ ಕೆಲಸ ಸಿಗ್ತಾ ಇಲ್ಲ’ | ಮನನೊಂದ ಯುವತಿ ರೈಲು ಹಳಿಗೆ ಹಾರಿ ಆತ್ಮಹತ್ಯೆ



















