ನೆಲಮಂಗಲ : ಮುಸ್ಲಿಂ ಮದುವೆ ಮನೆಯಲ್ಲಿ ತಿಲಕ ಇಟ್ಕೊಂಡು ಊಟಕ್ಕೆ ಕುಳಿತಿದ್ದ ಹಿಂದೂ ವ್ಯಕ್ತಿಯನ್ನು ಅರ್ಧದಲ್ಲೇ ಎಬ್ಬಿಸಿ, ನಿಮಗೆ ಊಟ ಹಾಕೋದಿಲ್ಲ ಎಂದು ಅವಮಾನ ಮಾಡಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ.
ಇಸ್ಲಾಂಪುರದ ನಿವಾಸಿ ಸಮಿವುಲ್ಲಾ ಕುಟುಂಬದ ಮದುವೆಗೆ ರಾಜು ಎಂಬುವವರನ್ನು ಆಹ್ವಾನಿಸಲಾಗಿತ್ತು. ಅ.26ರಂದು ನೆಲಮಂಗದಲ ಖಾಸಗಿ ಕಲ್ಯಾಣ ಮಂಟಪದಲ್ಲಿ ಮುಜಾಮಿಲ್ ಪಾಷ ಹಾಗೂ ಸಾನಿಯಾ ಜೋಡಿ ಮದುವೆ ಕಾರ್ಯಕ್ರಮ ಆಯೋಜನೆಗೊಂಡಿತ್ತು.

ವಧು ಸಾನಿಯಾ ಸಂಬಂಧಿ ರಾಜು ಎಂಬಾತನಿಗೆ ಮದುವೆಗೆ ಬರುವಂತೆ ತಿಳಿಸಿದ್ದರು. ಆಹ್ವಾನ ನೀಡಿದ್ದ ಕಾರಣ ಕ್ಷೌರಿಕ ಕೆಲಸವನ್ನು ಬೇಗನೆ ಮುಗಿಸಿ ಶಾಪ್ ಕ್ಲೋಸ್ ಮಾಡಿದ ರಾಜು, ಮದುವೆಗೆ ತೆರಳಿದ್ದರು.
ಮದುವೆಯಲ್ಲಿ ಊಟಕ್ಕೆ ಕುಳಿತಿದ್ದ ವೇಳೆ ರಾಜು ತಿಲಕ ಇಟ್ಟಿದ್ದನ್ನ ನೋಡಿ ನಿಮಗೆ ಊಟ ಹಾಕುವುದಿಲ್ಲ, ನಿಮ್ಮನ್ನ ಯಾರು ಕರೆದಿದ್ದು ಎಂದು ಸಮಿವುಲ್ಲಾ ಅವಮಾನ ಮಾಡಿದ್ದಾರೆ. ಹಿಂದೂಗಳಿಗೆ ನಾವು ಊಟ ಹಾಕುವುದಿಲ್ಲ ಇಲ್ಲಿಂದ ಎದ್ದು ಹೋಗಿ ಎಂದು ಸಮಿವುಲ್ಲಾ ಕಳುಹಿಸಿದ್ದಾನೆ. ಇದೀಗ ಈ ಘಟನೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಇದನ್ನೂ ಓದಿ : ಸರ್ದಾರ್ ವಲ್ಲಭಭಾಯಿ ಪಟೇಲ್ 150ನೇ ಜಯಂತಿ | ಏಕತಾ ಪ್ರತಿಮೆ ಬಳಿ ಗಣರಾಜ್ಯೋತ್ಸವ ಮಾದರಿಯ ಪರೇಡ್



















