ಬೆಂಗಳೂರು: ಕಳೆದ ಎರಡು ತಿಂಗಳಿಂದ ಪಿಂಚಣೆ ಕೊಟ್ಟಿಲ್ಲ ಎಂದು ನೂರಾರು ನಿವೃತ್ತ ಪಾಲಿಕೆಯ ನೌಕರರು ಜಿಬಿಎ ಕಚೇರಿಗೆ ಮುತ್ತಿಗೆ ಹಾಕಿ, ಪ್ರತಿಭಟನೆ ಮಾಡಿದ್ದಾರೆ.
ನಮ್ಮ ಜೀವನಕ್ಕೆ ಅದಾರವಾಗಿರುವುದು ಪಿಂಚಣೆ ಹಣವೊಂದೆ. ನಮಗೆ ಔಷಧಿ ಹಾಗೂ ಇತರೆ ಖರ್ಚುಗಳು ಇರುತ್ತವೆ, ನಮಗೆ ಅರೋಗ್ಯ ಸಮಸ್ಯೆ ಅದರೆ ಅಸ್ಪತ್ರೆ ಖರ್ಚಿಗೂ ಹಣ ಇಲ್ಲ. ಹಣ ಇಲ್ಲದೆ ಜೀವನ ನಡೆಸುವುದು ಕಷ್ಟವಾಗಿದೆ ಕೂಡಲೇ ಪಿಂಚಣಿ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಈ ವೇಳೆ ಪ್ರತಿಭಟನೆ ಸ್ಥಳಕ್ಕೆ ಅಗಮಿಸಿದ ಜಿಬಿಎ ಮುಖ್ಯ ಅಯುಕ್ತ ಮಹೇಶ್ವರ ರಾವ್ ,ಇನ್ನೂ ಎರಡು ದಿನಗಳಲ್ಲಿ ನಿಮ್ಮ ಪಿಂಚಣಿ ಹಣವನ್ನು ನೇರವಾಗಿ ನಿಮ್ಮ ಬ್ಯಾಂಕ್ ಅಕೌಂಟ್ ಗೆ ವರ್ಗವಣೆ ಅಗುತ್ತದೆ ಎಂದು ಭರವಸೆ ನೀಡಿದ್ದಾರೆ.
ಮುಖ್ಯ ಅಯುಕ್ತರ ಭರವಸೆ ನೀಡಿದ ಹಿನ್ನಲೆ ನಿವೃತ್ತ ಪಾಲಿಕೆ ನೌಕರರು ಪ್ರತಿಭಟನೆಯನ್ನು ಕೈ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.



















