ನವದೆಹಲಿ: ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾರಿಗೆ ಕಪಾಳಮೋಕ್ಷ ಮಾಡಿ ಧಾರ್ಷ್ಟ್ಯ ಮೆರೆದ ಆರೋಪಿಯನ್ನು ಪೊಲೀಸರು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದ್ದು, ಪ್ರಾಥಮಿಕ ತನಿಖೆಯ ಸಂದರ್ಭದಲ್ಲಿ ಆತನ ಸಂಬಂಧಿಯೊಬ್ಬ ಜೈಲಿನಲ್ಲಿದ್ದು ಬಿಡುಗಡೆ ಮಾಡಬೇಕೆಂದು ಕಪಾಳಮೋಕ್ಷ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ರೇಖಾ ಗುಪ್ತಾ ಅವರು ತಮ್ಮ ನಿವಾಸದಲ್ಲಿ ನಡೆದ ಸಾರ್ವಜನಿಕ ಅಹವಾಲು (ಜನ್ ಸುನ್ವಾಯಿ) ಸಂದರ್ಭದಲ್ಲಿ ರಾಜ್ಯೋಟ್ ನಿವಾಸಿ 41 ವರ್ಷದ ರಾಜೇಶ್ ಭಾಯಿ ಖಿಮ್ಮಿ ಭಾಯಿ ಸಕರಿಯಾ ಎಂಬಾತ ಕಪಾಳ ಮೋಕ್ಷ ಮಾಡಿದ್ದಾನೆ.
ಮೂಲಗಳ ಪ್ರಕಾರ, ರಾಜೇಶ್ ನ ಸಂಬಂಧಿಕನೊಬ್ಬ ಜೈಲಿನಲ್ಲಿದ್ದು, ಆತನ ಬಿಡುಗಡೆ ಕೋರಿ ಅರ್ಜಿಯೊಂದಿಗೆ ಬಂದಿದ್ದ, ಆ ವಿಷಯವು ಪ್ರಸ್ತುತ ನ್ಯಾಯಾಲಯದಲ್ಲಿ ಬಾಕಿ ಇದೆ.
ಬಂಧನದಲ್ಲಿದ್ದು, ಆತನ ಉದ್ದೇಶಗಳನ್ನು ನಿರ್ಧರಿಸಲು ವಿವರವಾದ ವಿಚಾರಣೆಯನ್ನು ಎದುರಿಸಬೇಕಾಗುತ್ತದೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ಆರೋಪಿ ಒದಗಿಸಿದ ಹೆಸರು ಮತ್ತು ವಿಳಾಸವನ್ನು ಪರಿಶೀಲಿಸಲು ದೆಹಲಿ ಪೊಲೀಸರು ಗುಜರಾತ್ ಪೊಲೀಸರನ್ನು ಕೂಡ ಸಂಪರ್ಕಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಘಟನೆಯನ್ನು ಬಿಜೆಪಿ ಮಾತ್ರವಲ್ಲದೆ, ಕಾಂಗ್ರೆಸ್, ಆಮ್ ಆದ್ಮಿ ಪಕ್ಷ ಕೂಡ ತೀವ್ರವಾಗಿ ಖಂಡಿಸಿವೆ.



















