ಬಿಜೆಪಿ ರೆಬೆಲ್ಸ್ ತಂಡ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಅಕ್ರಮ ಬಾಂಗ್ಲಾ ನುಸುಳುಕೋರರ ಬಗ್ಗೆ ಅಧ್ಯಯನ ವರದಿ ಸಲ್ಲಿಕೆ ಮಾಡಿದೆ.
ರಾಜ್ಯದಲ್ಲೂ ಬಾಂಗ್ಲಾ ನುಸುಳುಕೋರರಿದ್ದು ಅವರನ್ನು ದೇಶದಿಂದ ಗಡಿಪಾರು ಮಾಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಲಾಯಿತು. ಅಲ್ಲದೇ, ಇದೇ ಮನವಿಯನ್ನು ಡಿಜಿ ಐಜಿಪಿ ಸಲೀಂ ಅವರಿಗೂ ಸಲ್ಲಿಸಲಾಯಿತು. ಟೀಮ್ ನಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಶ್ರೀಮಂತ ಪಾಟೀಲ್, ಶಾಸಕ ಬಿ.ಪಿ. ಹರೀಶ್, ಮಾಜಿ ಶಾಸಕ ಮಹೇಶ್ ಕುಮಟಳ್ಳಿ, ಜೆಡಿಎಸ್ ನಾಯಕ ಎನ್.ಆರ್ ಸಂತೋಷ್ ಇದ್ದರು.



















