ಆಂಧ್ರದಲ್ಲಿ ಲಿಕ್ಕರ್ ಹಗರಣ ಸಂಬಂಧ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನಿಂದ ವಿದೇಶಕ್ಕೆ ಹಾರುತ್ತಿದ್ದ ಮಾಜಿ ಶಾಸಕನನ್ನು ಪೊಲೀಸರು ಲಾಕ್ ಮಾಡಿದ್ದಾರೆ.
ಚಂದ್ರಗಿರಿಯ ಮಾಜಿ ಶಾಸಕ ಚೆವ್ವಿರೆಡ್ಡಿ ಬಾಸ್ಕರ್ ರೆಡ್ಡಿಯನ್ನು ಪೊಲೀಸರು ವಶಕ್ಕೆ ಪಡೆದು ಕೆಂಪೇಗೌಡ ಏರ್ಪೋಟ್ ಠಾಣೆ ಪೊಲೀಸರಿಂದ ಆಂಧ್ರ ಪೊಲೀಸರಿಗೆ ಹಸ್ತಾಂತರ ಮಾಡಲಾಗಿದೆ. ನಿನ್ನೆ ಬೆಳಗ್ಗೆ ವಿದೇಶಕ್ಕೆ ತೆರಳುತ್ತಿದ್ದ ವೇಳೆ ಲುಕ್ ಔಟ್ ನೋಟಿಸ್ ಇದ್ದ ಕಾರಣ ಇಮಿಗ್ರೇಷನ್ ಅಧಿಕಾರಿಗಳು ಚೆವ್ವಿರೆಡ್ಡಿ ಬಾಸ್ಕರ್ ರೆಡ್ಡಿಯನ್ನು ತಡೆದು ಏರ್ಪೋಟ್ ಪೊಲೀಸರ ವಶಕ್ಕೆ ನೀಡಿದ್ದರು.
ನಂತರ ಆಂಧ್ರ ಎಎಸ್ಪಿ ಮಹೇಶ್ ಗೆ ಏರ್ಪೋಟ್ ಪೊಲೀಸರಿಂದ ಮಾಜಿ ಶಾಸಕನನ್ನು ಹಸ್ತಾಂತರ ಮಾಡಲಾಯಿತು. ಬಳಿಕ ಮಂಗಳಗಿರಿ ಪೊಲೀಸರಿಂದ ವಶಕ್ಕೆ ಪಡೆದು ಮೂರು ವಾಹನಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಮಾಜಿ ಶಾಸಕನ್ನು ಆಂಧ್ರದತ್ತ ಕರೆದೊಯ್ಯಲಾಯಿತು.