ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ವಿಚಾರವಾಗಿ ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ನೇತೃತ್ವದಲ್ಲಿ ಪಿಐಎಲ್ ಸಲ್ಲಿಸಲು ತಯಾರಿ ನಡೆಸಲಾಗಿದೆ.
ಹೇಮಾವತಿ ಕೆನಾಲ್ ಹೋರಾಟ ಈಗ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಸಾಕಷ್ಟು ರಾಜಕೀಯ ಜಟಾಪಟಿಗೆ ಈ ಹೋರಾಟ ಸಾಕ್ಷಿಯಾಗಿದೆ. ಒಂದೆಡೆ ಲಿಂಕ್ ಕೆನಾಲ್ ವಿರೋಧಿಸಿ ತುಮಕೂರು ಭಾಗದ ರೈತರ ಹೋರಾಟ ನಡೆಸುತ್ತಿದ್ದರೆ, ಇನ್ನೊಂದೆಡೆ ನೀರಿಗಾಗಿ ಕಾನೂನು ಹೋರಾಟಕ್ಕೆ ನಿರ್ಧರಿಸಲಾಗಿದೆ.
ಹೈಕೋರ್ಟ್ ನಲ್ಲಿ ಪಿಐಎಲ್ ಸಲ್ಲಿಸಲು ಮಾಗಡಿ ಶಾಸಕ ಹೆಚ್.ಸಿ. ಬಾಲಕೃಷ್ಣ ನೇತೃತ್ವದಲ್ಲಿ ತಯಾರಿ ನಡೆಸಲಾಗುತ್ತಿದೆ. ಹೇಮಾವತಿ ನೀರನ ಸಾಧಕ ಭಾದಕ ತಿಳಿಯಲು ಪಿಐಎಲ್ ಸಲ್ಲಿಸಲಾಗುತ್ತಿದೆ. ಕಾನೂನು ಹೋರಾಟದ ಜೊತೆಗೆ ರಸ್ತೆಗೆ ಇಳಿದು ಪ್ರತಿಭಟನೆಗೆ ತಯಾರಿ ನಡೆಸಲಾಗಿದೆ.
ಈ ಮಧ್ಯೆ ಜೂನ್ 15ರಂದು ಸರ್ವ ಪಕ್ಷಗಳ ಸಭೆ ಕರೆಯಲಾಗಿದೆ. ಈ ಸಭೆಯನ್ನು ಮಾಗಡಿಯಲ್ಲಿ ಆಯೋಜಿಸಲಾಗಿದೆ. ಆ ದಿನ ಮುಂದಿನ ಹೋರಾಟದ ಬಗ್ಗೆ ತೀರ್ಮಾನಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಎರಡು ಜಿಲ್ಲೆಗಳ ನಡುವೆ ಜಟಾಪಟಿಗೆ ಈ ಹೇಮಾವತಿ ಹೋರಾಟ ವೇದಿಕೆಯಾಗಿದೆ.