ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮರವಂಜಿ ಗ್ರಾಮದಲ್ಲಿ ತೋಟಕ್ಕೆ ಆನೆಯೊಂದು ನುಗ್ಗಿ ಸಾಕಷ್ಟು ಹಾನಿ ಮಾಡಿರುವ ಘಟನೆಯೊಂದು ನಡೆದಿದೆ.
ಮರವಂಜಿಯ ಓಂಕಾರಪ್ಪ ತೋಟಕ್ಕೆ ನುಗ್ಗಿ ಬಾಳೆ ತಿಂದು ತೋಟ ಹಾಳು ಮಾಡಿದೆ. ಮರವಂಜಿ ಗ್ರಾಮದ ಓಂಕಾರಪ್ಪ ಒಂದೂವರೆ ಎಕರೆ ಪ್ರದೇಶದಲ್ಲಿ ಅಡಿಕೆ, ಬಾಳೆ ಬೆಳೆದಿದ್ದರು. ಆದರೆ, ನುಗ್ಗಿ ಸಂಪೂರ್ಣ ಹಾಳು ಮಾಡಿದೆ. ಈಗ ಈ ಆನೆಯಿಂದಾಗಿ ಗ್ರಾಮದ ರೈತರು ಆತಂಕ ಪಡುವಂತಾಗಿದೆ.
ಇತ್ತೀಚೆಗಷ್ಟೇ ಆನೆಯೊಂದು ಬಾಲಕಿಯನ್ನು ತುಳಿದು ಕೊಂದಿತ್ತು. ಈಗ ಮತ್ತೆ ಆನೆ ಎಂಟ್ರಿ ಕೊಟ್ಟಿದ್ದು, ಗ್ರಾಮಸ್ಥರು ಭಯದಲ್ಲಿ ಬದುಕು ನಡೆಸುವಂತಾಗಿದೆ. ಹೀಗಾಗಿ ಆನೆಯನ್ನು ಭದ್ರಾ ದಟ್ಟ ಕಾಡಿಗೆ ಓಡಿಸುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ