ಕಮಲ್ ಹಾಸನ್ ಇತಿಹಾಸಕಾರರ, ಭಾಷಾ ತಜ್ಞರ, ಯಾವ ಆಧಾರದಲ್ಲಿ ತಮಿಳಿನಿಂದ ಕನ್ನಡ ಭಾಷೆ ಉದಯಿಸಿತು ಅಂತಾ ಹೇಳಿದ್ದಾರೆ. 75 ವರ್ಷಗಳಿಂದ ಹಿಂದೆ ರಾಜಗೋಪಾಲಚಾರ್ಯರು ಮಾಡಿದ ತಪ್ಪನ್ನೇ ಇವತ್ತು ಕಮಲ್ ಹಾಸನ್ ಪುನರಾವರ್ತಿಸ್ತಿದ್ದಾರೆ.
ಆದ್ರೆ ಅವತ್ತು ಅವರಾಡಿದ ಮಾತಿಗೆ ಕ್ಷಮೆ ಕೇಳಿದ್ದಾರೆ. ಕಮಲ್ ಯಾಕೆ ಕ್ಷಮೆ ಕೇಳ್ತಿಲ್ಲ. ನಿಮ್ಮ ವಾಣಿಜ್ಯ ಉದ್ದೇಶವಾಗಿರೋ ಸಿನಿಮಾ ಬಿಡುಗಡೆಗೆ ಕರ್ನಾಟಕ ಪೊಲೀಸರ ಭದ್ರತೆ ಕೇಳ್ತಿದ್ದೀರಿ ಅದು ಕೂಡಾ ನಿಮ್ಮ ತಪ್ಪಿಂದಾಗಿರುವ ಅವಾಂತರಕ್ಕೆ ಅಂತಾ ಕರ್ನಾಟಕ ಹೈಕೋರ್ಟ್ ಕಮಲ್ ಪರ ವಕೀಲರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ನೀವು ನ್ಯಾಯಾಲಯಕ್ಕೆ ನೀಡಿರುವ ಮನವಿಯಲ್ಲಿ ಥಗ್ ಲೈಫ್ 300 ಕೋಟಿ ಬಂಡವಾಳ ಹೂಡಿರುವ ಸಿನಿಮಾ, ನಾಯಗನ್ ತರುವಾಯ ಕಮಲ್ ಮತ್ತು ಮಣಿರತ್ಮಂ ನಿರ್ದೇಶನದ ಅತಿ ನಿರೀಕ್ಷಿತ ಚಿತ್ರ ಅಂತೆಲ್ಲಾ ಉಲ್ಲೇಖಿಸಿದ್ದೀರಿ. ಹಾಗಂತಾ ಈ ವಿಚಾರಗಳನ್ನು ಮಾತನಾಡುವ ಮುನ್ನ ನಿಮಗೆ ಇದರ ಅರಿವಿರಲಿಲ್ವಾ.ನಿಮ್ಮ ಸ್ವಯಂಕೃತ ಅಪರಾಧಕ್ಕೆ ಕರ್ನಾಟಕದ ಪೊಲೀಸರಿಂದ ರಕ್ಷಣೆ ಕೇಳೋದು ತಾರ್ಕಿಕವಾ. ವಾಕ್ ಸ್ವಾತಂತ್ರ ಎಂದಿಗೂ ಒಂದು ಸಮೂಹದ ಜನರನ್ನು ನೋವಿಸುವಂತಿರಬಾರ್ದು. ನೀವು ಕ್ಷಮೆ ಕೇಳೋದಿಲ್ಲವೆಂದಾದ್ರೆ ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆ ಅಗತ್ಯವೇ ಇಲ್ವಲ್ಲಾ, ದೇಶದೆಲ್ಲೆಡೆ ರಿಲೀಸ್ ಮಾಡಿಕೊಳ್ಳಿ, ಕರ್ನಾಟಕವನ್ನು ಹೊರತು ಪಡಿಸಿ. ನಿಮ್ಮ ಹೇಳಿಕೆಗೆ ಬದ್ಧವಾಗಿರೋದಾದ್ರೆ ನಿಮ್ಮ ಸಿನಿಮಾಗೆ ರಾಜ್ಯದ ಆಡಳಿತ ಯಂತ್ರವನ್ನು ಬಳಕೆ ಮಾಡಿಕೊಳ್ಳೋದು ತರವಲ್ಲ.
ನಿಮ್ಮಿಂದಲೇ ಸೃಷ್ಟಿಯಾದ ಸಮಸ್ಯೆಯನ್ನ ನೀವೇ ಸರಿಪಡಿಸಿಕೊಳ್ಳಬೇಕು ಅಂತಾ ನ್ಯಾಯಮೂರ್ತಿ ನಾಗಪ್ರಸನ್ನ ಅವರು ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ ವಿಚಾರಣೆಯನ್ನು ಜೂನ್ 10ಕ್ಕೆ ಮುಂದೂಡಿಕೆ ಮಾಡಲಾಗಿದೆ. ಹೀಗಾಗಿ ನಿಗದಿಯಂತೆ ಕರ್ನಾಟಕದಲ್ಲಿ ಥಗ್ ಲೈಫ್ ಬಿಡುಗಡೆಗೆ ಬ್ರೇಕ್ ಬಿದ್ದಿದೆ.