ಮೈಸೂರು: ಐಪಿಎಲ್ 2025 ಮುಗಿಯುವ ಹಂತಕ್ಕೆ ಬಂದಿದ್ದು, ಈ ಬಾರಿ ಆರ್ ಸಿಬಿ ಫೈನಲ್ ಪ್ರವೇಶಿಸಿದೆ. ಜೂನ್ 3 ರಂದು ನಡೆಯಲಿರುವ ರಣ ರೋಚಕ ಪಂದ್ಯದಲ್ಲಿ ಪಂಜಬ್ ಕಿಂಗ್ಸ್ ಮತ್ತು ಆರ್ಸಿಬಿ ಮುಖಮುಖಿಯಾಗಲಿವೆ. ಈ ಹಿನ್ನೆಲೆಯಲ್ಲಿ ಆರ್ ಸಿಬಿ ಅಭಿಮಾನಿಗಳು ಗೆಲುವಿಗಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

ಆರ್ಸಿಬಿ ಗೆಲ್ಲಲಿ ಎಂದು ಹಲವೆಡೆ ಪೂಜೆ- ಪುನಸ್ಕಾರಗಳನ್ನು ನಡೆಸಲಾಗುತ್ತಿದೆ. ಅದೇ ರೀತಿ RCB ಅಭಿಮಾನಿಗಳಿಬ್ಬರು ಈ ಬಾರಿ ತಮ್ಮ ಟೀಂ ಕಪ್ ಗೆಲ್ಲಲಿ ಎಂದು ತಮ್ಮ ಕಾರನ್ನೇ ಸಂಪೂರ್ಣ RCB ಮಯ ಮಾಡಿದ್ದಾರೆ. ಮೈಸೂರಿನಲ್ಲಿ ಕಾರು ಮಾಲೀಕರಿಬ್ಬರು ಈ ರೀತಿ ತಮ್ಮ ಕಾರನ್ನು ಆರ್ ಸಿಬಿಮಯ ಮಾಡಿದ್ದಾರೆ.
ಮೈಸೂರಿನ ಬೆಳಗೊಳದ ಪ್ರಸಾದ್ ಹಾಗೂ ಶ್ರೇಯಸ್ ಕಾರಿನ ಮಾಲೀಕರು. ಶ್ರೇಯಸ್ ಹಾಗೂ ಪ್ರಸಾದ್ ಇಬ್ಬರೂ ಉದ್ಯಮಿಗಳು. ಈ ಬಾರಿ ಆರ್.ಸಿ.ಬಿ ಕಪ್ ಗೆಲ್ಲಬೇಕು. ಹೀಗಾಗಿ ನಮ್ಮ ಕಾರಿಗೆ ಸಂಪೂರ್ಣ RCB ಸ್ಟಿಕ್ಕರ್ ಹಾಕಿಸಿದ್ದೇವೆ. RCB ಗೆಲ್ಲಲಿ ಅಂತ ಚಾಮುಂಡಿ ಬೆಟ್ಟ ಹೋಗಿ ಪೂಜೆ ಮಾಡಿಸುತ್ತೇವೆ. ನಂತರ ಇಡೀ ಮೈಸೂರಿನ ಸುತ್ತ ಒಂದು ರೌಂಡ್ ಹಾಕುತ್ತೇವೆ. ಬೆಂಗಳೂರಿಗೆ ತೆರಳಿ ಅಲ್ಲೂ ಕೂಡ ಅಭಿಮಾನಿಗಳ ಜೊತೆ ಬೆಂಗಳೂರು ನಗರ ಸುತ್ತುತ್ತೇವೆ. RCB ಕಪ್ ಗಾಗಿ 18 ವರ್ಷ ಕಾದಿದೆ. ಈ ಬಾರಿ ಕಪ್ ನಮ್ಮದೇ ಎಂದಿದ್ದಾರೆ.