ಭಾರತದ ಭೂಶಿರ…ಭೂಲೋಕದ ಸ್ವರ್ಗ…ಹಿಂದೂಸ್ತಾನದ ಮುಕುಟ ಮಣಿ….ಹೀಗೆ ಹತ್ತಾರು ಹೆಸರುಗಳಿಂದ ಕರೆಸಿಕೊಳ್ಳೋ ಪವಿತ್ರ ಕಾಶ್ಮೀರವೇ ರಕ್ತಸಿಕ್ತಗೊಂಡು ದಶಕಗಳೇ ಉರುಳಿ ಹೋಗಿವೆ. 1947ರಲ್ಲಿ ಭಾರತದಿಂದ ಬೇರ್ಪಟ್ಟ ಪಾಕಿಸ್ತಾನ, ಕಾಶ್ಮೀರಕ್ಕಾಗಿನ ತನ್ನ ಮಸಲತ್ತನ್ನ ಏಳು ದಶಕಗಳೇ ಉರುಳಿದ್ರೂ ನಿಲ್ಲಿಸೋ ಲಕ್ಷಣಗಳು ಕಾಣ್ತಿಲ್ಲ. ಹಾಗಿದ್ರೆ ಏನಿದು ಕಾಶ್ಮೀರ ವಿವಾದ, ಇಂದು ಭಾರತ ಭೂಪಟದಲ್ಲಿರುವ ಕಾಶ್ಮೀರಕ್ಕೂ ಅಸಲಿಗೆ ಗೋಚರಿಸೋ ಕಾಶ್ಮೀರಕ್ಕೂ ಇರುವ ವ್ಯತ್ಯಾಸವಾದ್ರು ಏನು. ಏನಿದು ಪಿಒಕೆ…ಎಲ್ಲಿದೆ ಭಾರತದ-ಪಾಕಿಸ್ತಾನ ನಡುವಿನ ಅಂತಾರಷ್ಟ್ರೀಯ ಗಡಿರೇಖೆ..ಇವತ್ತು ಸಮಸ್ತ ಭಾರತೀಯರಿಗೆ ಅಸ್ಪಷ್ಟವಾಗಿರುವ ದೊಡ್ಡ ಸತ್ಯವೊಂದನ್ನ ನಿಮ್ಮ ಮುಂದೆ ತೆರೆದಿಟ್ಟಿದ್ದೇವೆ.
ಭಾರತ ಸ್ವತಂತ್ರವಾದ್ರೂ ಕಾಶ್ಮೀರದ ಭವಿಷ್ಯ ಡೋಲಾಯಮಾನ
1947, ಆಗಸ್ಟ್ 15. ಬ್ರಿಟೀಶರ ಸಂಕೋಲೆಗಳನ್ನು ಕಳಚಿಕೊಂಡು ಪಾಕಿಸ್ತಾನದಿಂದ ಬೇರ್ಪಟ್ಟು ಭಾರತ ಸ್ವತಂತ್ರ ರಾಷ್ಟ್ರವಾಗಿತ್ತು. ಆದ್ರೆ, ಶ್ವೇತ ಸುಂದರಿ ಕಾಶ್ಮೀರ ಮಾತ್ರ ಭಾರತ ಮತ್ತು ಪಾಕಿಸ್ತಾನದಲ್ಲಿ ವಿಲೀನವಾಗೋ ಇರಾದೆ ತೋರಲೇ ಇಲ್ಲ. ಅವತ್ತಲ್ಲಿ ಹಿಂದೂ ರಾಜ ಹರೀ ಸಿಂಗನ ಆಡಳಿತ ನಡೆದಿತ್ತು. ಈ ಕಾಶ್ಮೀರವನ್ನು ತನ್ನ ಕಬ್ಜಾ ಮಾಡಿಕೊಳ್ಳಲು ಪಾಕಿಸ್ತಾನದ ಮೊಹಮದಲಿ ಜಿನ್ನಾ ಇನ್ನಿಲ್ಲದ ಕಸರತ್ತು ನಡೆಸಿದ್ದ. ಇತ್ತ ಭಾರತವೂ ಹರಿಸಿಂಗನ ಮನವೊಲಿಕೆ ನಡೆಸಿತ್ತು. ಆದ್ಕೆ ಪಾಕ್ ಪರ ನಿಲ್ಲಲೊಪ್ಪದ ಹರಿಸಿಂಗ್ ಭಾರತದ ಅವಿಭಾಜ್ಯ ಅಂಗವಾಗೋ ಮನಸ್ಸು ಮಾಡಿದ್ದ. ಅಲ್ಲಿಂದಲೇ ಶುರುವಾಯ್ತು ಪಾಕಿಸ್ತಾನಿಗಳ ಕುತಂತ್ರದ ಮೊದಲ ಚರಣ.
ಆಪರೇಷನ್ ಜಿಬ್ರಾಲ್ಟರ್ ಗೆ ಪಾಕಿಸ್ತಾನದ ಮುನ್ನುಡಿ
ಆಗಸ್ಟ್, 1965…ಪಾಕಿಸ್ತಾನವನ್ನು ಕಬಳಿಸೋ ಹುನ್ನಾರ ರೂಪಿಸಿದ್ದ ಪಾಕಿಸ್ತಾನ, ಕಾಶ್ಮೀರಿ ಮುಸ್ಲಿಂರಿಗೆ ಭಾರತದ ಮೇಲೆ ಮುನಿಸಿದೆ ಅಂತಾ ಲೆಕ್ಕಿಸಿತ್ತು. ಅದನ್ನೇ ಬಂಡವಾಳ ಮಾಡಿಕೊಂಡು ಕಣಿವೆಯನ್ನು ಕೈವಶ ಮಾಡಿಕೊಳ್ಳಲು ತನ್ನ ಸೇನೆಯ ಕಮಾಂಡೋಗಳನ್ನು ಕಾಶ್ಮೀರಿ ನಿವಾಸಿಗಳ ವೇಷದಲ್ಲಿ ಕಣಿವೆ ತಲುಪಿಸಿತ್ತು. ಅಷ್ಟೇ ಅಲ್ಲಾ ನೊಂದಿರೋ ಕಾಶ್ಮೀರಿ ಮುಸ್ಲಿಂಮರು ಪಾಕಿಸ್ತಾನ ಪರ ನಿಲ್ತಾರೆ ಅಂತಾ ಗಣಿತ ಮಾಡಿತ್ತು. ಆದ್ರೆ ಈ ಪ್ಲ್ಯಾನ್ ಉಲ್ಟಾ ಹೊಡೆದಿತ್ತು, ಪಾಕ್ ನ ಆಪರೇಷನ್ ಜಿಬ್ರಾಲ್ಟರ್ ನ್ನು ಕಾಶ್ಮೀರಿ ಮುಸ್ಲಿಮರ ಸಹಕಾರದಿಂದ ಭಾರತ ಮಣ್ಣುಮುಕ್ಕಿಸಿತ್ತು.
ದೊಡ್ಡ ಪ್ರಮಾದಕ್ಕೆ ಸಾಕ್ಷಿಯಾದ ಶಿಮ್ಲಾ ಒಪ್ಪಂದ
ರಾಜಾ ಹರಿಸಿಂಗ್ ಕಾಶ್ಮೀರವನ್ನು ಭಾರತದೊಳಗೆ ವಿಲೀನ ಮಾಡಿ ಕೈತೊಳೆದುಕೊಂಡಿದ್ದ. ಇತ್ತ ಎಲ್ಲವೂ ಸುಸೂತ್ರ ಅಂದುಕೊಂಡಿದ್ದ ಭಾರತಕ್ಕೆ ಮತ್ತೆ ಪಾಕ್ ತಲೆನೋವಾಗಿತ್ತು. 1971….ಪಾಕ್ ಮತ್ತೆ ಭಾರತದ ಮೇಲೆರಗಿತ್ತು. ಉರಿ, ಪಠಾಣ್ ಕೋಟ್, ದ್ರಾಸ್, ಕಾರ್ಗಿಲ್, ಪೂಂಚ್ ಗಳಲ್ಲಿ ಮತ್ತೆ ಕ್ಯಾತೆ ಶುರುವಾಗಿತ್ತು. ಈ ಬಾರಿ ಭಾರತ ಆಪರೇಷನ್ ಗ್ರ್ಯಾಂಡ್ ಸ್ಲ್ಯಾಮ್ ಶುರುಮಾಡಿತ್ತು. ನುಗ್ಗಿ ಬಂದಿದ್ದ ಪಾಕಿಗಳನ್ನು ಹೊರಗಟ್ಟೋ ಕಾರ್ಯ ಶುರುಮಾಡಿತ್ತು. ಉರಿ,ಪೂಂಚ್ ಗಳಲ್ಲಿ ಹೆಜ್ಜೆ ಇಟ್ಟಿದ್ದವರನ್ನು ಹೊಡೆದೋಡಿಸಲಾಗಿತ್ತು. ಆದ್ರೆ, ಮುಜಾಫರಾಬಾದ್, ಬಾಲ್ಟಿಸ್ತಾನ್ ನಲ್ಲಿ ಪಾಕ್ ಬಿಗಿ ಹಿಡಿತ ಸಾಧಿಸಿತ್ತು. ಭಾರತೀಯ ಸೇನೆ ಮುನ್ನುಗ್ಗೋ ಹುಮ್ಮಸ್ಸಿನಲ್ಲಿತ್ತು, ವಾಯು ಸೇನೆ ಶತ್ರುಗಳ ಸಂಹಾರದ ಧಾವಂತದಲ್ಲಿತ್ತು. ಆದ್ರೆ ಭಾರತ ಅತ್ಯಂತ ಕರಾಳ ಒಪ್ಪಂದವೊಂದಕ್ಕೆ ವಿಶ್ವಸಂಸ್ಥೆ ಸಾಕ್ಷಿಯಾಗಿ ಒಡಂಬಡಿಕೆ ಮಾಡಿಕೊಂಡಿತ್ತು. ಇದರ ಪ್ರಕಾರ ಅಂದು ಭಾರತೀಯ ಸೇನೆಯಿದ್ದ ಪ್ರದೇಶದವರೆಗೂ ಭಾರತ, ಪಾಕ್ ಹಿಡಿತದಲ್ಲಿದ್ದದ್ದೆಲ್ಲಾ ಪಾಕಿಗಳದ್ದು ಅನ್ನೋ ಕರಾರು ಮಾಡಿಕೊಳ್ಳಲಾಯ್ತು. ಹೀಗೆ ಉದಯಿಸಿದ್ದೇ ಪಾಕ್ ಆಕ್ರಮಿತ ಕಾಶ್ಮೀರ, ಅಂದಿನ ಆ ಕರಾಳ ಒಪ್ಪಂದದ ಕರಿಛಾಯೆಯೇ ಇಂದಿನ ಪಿಓಕೆ ಪಾಕ್ ಆಕ್ರಮಿತ ಕಾಶ್ಮೀರ. ಹಾಗಂತಾ ಇಂದಿಗೂ ಇದು ಅಂತಾರಾಷ್ಟ್ರಿಯ ಗಡಿ ರೇಖೆ ಅಲ್ಲವೇ ಅಲ್ಲ. ಅಂದಿನ ಅನುಕೂಲ ಸಿಂಧುತ್ವ ರಾಜಕೀಯದ ಪಾಪದ ಕೂಸೇ ಇಂದಿನ ಪಿಒಕೆ. ಹೀಗಾಗಿಯೇ ಮೋದಿ ಸರ್ಕಾರ ಶಿಮ್ಲಾ ಒಪ್ಪಂದವನ್ನು ರದ್ದು ಮಾಡಿದೆ.
ಪಿಒಕೆ ಗೆರೆ ಅಳಿಸಿ ಲಕ್ಷ್ಮಣ ರೇಖೆ ಬರೆದ ಮೋದಿ
1971ರ ಬಲು ದೊಡ್ಡ ಪ್ರಮಾದದ ಕರಾಳ ಅಧ್ಯಾಯವೇ ಇಂದಿನ ಪಿಓಕೆ. ಅಸಲಿಗಿದು ಯಾವುದೇ ಅಂತಾರಾಷ್ಟ್ರೀಯ ಗಡಿರೇಖೆ ಅಲ್ಲವೇ ಅಲ್ಲ, ಉಭಯ ದೇಶಗಳ ಸಮ್ಮತಿಯೊಂದಿಗೆ ಸೃಷ್ಟಿಯಾದ ತಾತ್ಕಾಲಿಕ ರೇಖೆಯಷ್ಟೇ. ಹಾಗಂತಾ ಪಾಕ್ ಆಕ್ರಮಿತ ಕಾಶ್ಮೀರದ ಮುಜಾಫರಾಬಾದ್ ಮತ್ತು ಬಾಲ್ಟಿಸ್ತಾನ್ ವಾಸ್ತವದಲ್ಲಿ ಭಾರತದ ಆಸ್ತಿ. ಆದ್ರೆ ಇದನ್ನು ಮರಳಿ ಪಡೆಯುವ ಯಾವ ಪ್ರಯತ್ನವೂ ಈ 7 ದಶಕಗಳಲ್ಲಿ ನಡೆಯಲೇ ಇಲ್ಲ. ಅಖಂಡ ಕಾಶ್ಮೀರದ ಕಲ್ಪನೆಯನ್ನು ಸಾಕಾರಗೊಳಿಸೋ ನಿಟ್ಟಲ್ಲೀಗ ಮೋದಿ ಸಿಂಧೂರ ರೇಖೆ ಗೀಚಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರ ನಮ್ಮದು ಅಂತಾ ಶರಾ ಬರೆದಿದ್ದಾರೆ. ಈ ಮೂಲಕ ಸ್ವತಂತ್ರ ಭಾರತದ ಅತಿ ದೊಡ್ಡ ಹೆಜ್ಜೆಯೊಂದನ್ನು ಈಗ ಇಡಲಾಗಿದೆ. ಪಿಒಕೆಯನ್ನು ಭಾರತ ಮರಳಿ ಪಡೆದ್ರೆ ಅವತ್ತು ಭಾರತದ ಮುಕುಟ ಮಣಿಗೆ ನಿಜಕ್ಕೂ ವಜ್ರದ ಕಿರೀಟ ತೊಡಿಸಿದಂತಾಗುತ್ತೆ.