ತುಮಕೂರು: ಭಾರತ ಮತ್ತು ಪಾಕ್ ಮಧ್ಯೆ ಸಂಘರ್ಷ ಆರಂಭವಾಗಿದೆ. ಪಾಕಿಸ್ತಾನಕ್ಕೆ ನುಗ್ಗಿ ಭಾರತೀಯ ಯೋಧರು ತಕ್ಕ ಪಾಠ ಕಲಿಸುತ್ತಿದ್ದಾರೆ. ಈ ವಿಚಾರವಾಗಿ ಮಾತನಾಡಿದ ಕಾಂಗ್ರೆಸ್ ಮುಖಂಡ ಹಾಗೂ ಹಿಂದುಳಿದ ವರ್ಗಗಳ ಅಧ್ಯಕ್ಷ ದ್ವಾರಕನಾಥ್, ಸಂವಿಧಾನದಲ್ಲಿ ಯುದ್ಧಕ್ಕೆ ಮಾನ್ಯತೆ ಇಲ್ಲ ಎಂದಿದ್ದಾರೆ.
ನಗರದ ವಿವಿಯ ಸಭಾಂಗಣದಲ್ಲಿ ಜನಸ್ಪಂದನ ಟ್ರಸ್ಟ್ ನಿಂದ ನಡೆಯುತ್ತಿರುವ ಸಂವಿಧಾನ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ಈಗ ಭಾರತದ ಪರಿಸ್ಥಿತಿ ಹೇಗಿದೆ ಯುದ್ದದ ಕಾಲದಲ್ಲಿ ನಾವಿದ್ದೇವೆ. ಇವತ್ತು ಪಾಕಿಸ್ತಾನದ ವಿರುದ್ಧ ಯುದ್ಧ ಆರಂಭವಾದ ಸಂದರ್ಭದಲ್ಲಿ ಸಂವಿಧಾನ ಏನು ಹೇಳುತ್ತದೆ? ಸಂವಿಧಾನದಲ್ಲಿ ಯುದ್ದಕ್ಕೆ ಅವಕಾಶ ಇದೆಯಾ? ಯುದ್ದವನ್ನು ನಾವು ಮೊದಲು ಮಾಡಬೇಕಾ? ಸಂವಿಧಾನದ ಮೂಲ ಆಶಯ ಏನಾಗಿದೆ ಅಂದರೆ, ಬುದ್ದ, ಬಸವಣ್ಣನವರ ಆಶಯವಾಗಿದೆ ಎಂದು ಹೇಳಿದ್ದಾರೆ.
ಅಂಬೇಡ್ಕರ್ ಅವರು, ಯುದ್ದ ನಿಮ್ಮ ಕಾನ್ಷಿಯಸ್ಗೆ ಬಿಟ್ಟಿದ್ದು. ಮೊದಲು ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳಬೇಕು. ದೇಶದ ಭದ್ರತೆ ಭದ್ರವಾಗಿರಬೇಕು ಅಂತಾರೆ. ಇದು ನಿಜವಾದ ದೇಶ ಭಕ್ತನ ಬಾಯಲ್ಲಿ ಬರುವ ಮಾತು. ಯುದ್ದದ ಸಂದರ್ಭದಲ್ಲಿ ದೇಶದ ಭದ್ರತೆ ನಮ್ಮ ರಕ್ಷಣೆ ಬಗ್ಗೆ ಬಾಬಾ ಸಾಹೇಬರು ಮಾತನಾಡಿದ್ದಾರೆ. ಆರ್ಟಿಕಲ್ಸ್ 352 ನಲ್ಲಿ ಇಂಥ ತುರ್ತು ಸಂದರ್ಭದಲ್ಲಿ ನಾವು ಹೇಗೆ ನಡೆದುಕೊಳ್ಳಬೇಕಾಗುತ್ತದೆ. ಜೊತೆಗೆ ನಮ್ಮನ್ನು ನಾವು ರಕ್ಷಣೆ ಮಾಡ್ಕೋಬೇಕಾಗುತ್ತದೆ ಎಂದು ಬರೆದಿದ್ದಾರೆ ಎಂದಿದ್ದಾರೆ.