ಉತ್ತರ ಕನ್ನಡ: ನಿಜವಾದ ಹಿಂದೂ ದ್ರೋಹಿಗಳೆಂದರೆ ಅದು ಬಿಜೆಪಿಯವರು ಮಾತ್ರ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಮಾತನಾಡಿದ ಅವರು, ಇಲ್ಲದಕ್ಕೆಲ್ಲ ಬಂದು ಹಿಂದುತ್ವ.. ಹಿಂದುತ್ವ ಅಂತಾರೆ. ಆ ಚಾಳಿಯನ್ನು ಬಿಜೆಪಿಯವರು ಬಿಡಬೇಕು. ಅವರಿಗೆ ಅದೊಂದು ರೋಗವಾಗಿ ಬಿಟ್ಟಿದೆ. ಚಿಕ್ಕಮಗಳೂರು ಮೂಲದ ಕೊಲೆ ಆರೋಪಿಗಳನ್ನು ಹಿಡಿದು ಸರ್ಕಾರ ಈಗಾಗಲೇ ತನಿಖೆ ನಡೆಸುತ್ತಿದೆ. ಕಾನೂನು ಇದ್ದಾಗ ತಪ್ಪಿತಸ್ಥರಿಗೆ ಕಾನೂನು ಬದ್ಧವಾಗಿ ಶಿಕ್ಷೆ ನೀಡುತ್ತೇವೆ. ಅವರು ಎಲ್ಲದಕ್ಕೂ ಟೀಕೆ ಟಿಪ್ಪಣಿ ಮಾಡುತ್ತಾರೆ. ಜನಿವಾರ, ತಾಳಿ ಅಂತಾ ಟೀಕೆ, ಟಿಪ್ಪಣಿ ಮಾಡಿದ್ದರು. ಆ ಘಟನೆಯನ್ನು ನಾವು ವಿರೋಧಿಸಿದ್ದೇವು. ಬಿಜೆಪಿಯವರು ಪರೀಕ್ಷೆಗೆ ಕಾನೂನು ಮಾಡಿದರು. ನಾವು ಕಾನೂನು ಮಾಡಿಲ್ಲ ಎಂದಿದ್ದಾರೆ.
ಕಾಂಗ್ರೆಸ್ ಸರ್ಕಾರವಿದ್ದಾಗ ಹೆಚ್ಚಿನ ಹಿಂದೂಗಳು ಹತ್ಯೆಯಾಗುತ್ತಿದ್ದಾರೆ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಾವೇನು ಬಿಜೆಪಿಯವರಿದ್ದಾಗ ಹಿಂದೂಗಳು, ಮುಸ್ಲಿಂರು ಅಂತಾ ಲೆಕ್ಕಾ ಮಾಡಿದ್ದೇವಾ? ಒಂದು ಪ್ರಾಣ ಹೋದಾಗ ಅದಕ್ಕೆ ಜಾತಿ ಇರಲ್ಲ. ಹುಟ್ಟಿದಾಗ ಯಾರೂ ಜಾತಿ ಬರೆದುಕೊಂಡು ಹುಟ್ಟಿಲ್ಲ. ಬಿಜೆಪಿಯವರು ಮಾಡಬಹುದು. ಪಹಲ್ಗಾಮ್ನಲ್ಲಿ ಅಷ್ಟು ಜನ ಅಮಾಯಕರಿಗೆ ರಕ್ಷಣೆ ನೀಡುವುದು ಅವರ ಕರ್ತವ್ಯವಾಗಿತ್ತು ಎಂದು ಕಿಡಿಕಾರಿದ್ದಾರೆ.