ಬೆಳಗಾವಿ : ನಗರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ನಿಮಿತ್ತ ಅದ್ದೂರಿ ಮೆರವಣಿಗೆಯನ್ನು ನಡೆಸಲಾಯಿತು.
ಮೆರವಣಿಗೆಯಲ್ಲಿ ಪಹಲ್ಗಾಮ್ ಉಗ್ರರ ದಾಳಿ ಖಂಡಿಸಿ, ಹಿಂದೂಗಳು ಒಗ್ಗೂಡಿ ಎಂಬ ಸಂದೇಶ ಸಾರುವ ರೂಪಕವನ್ನು ಪ್ರದರ್ಶಿಸಲಾಯಿತು. ನಾನು ಲಿಂಗಾಯತ, ನಾನು ಮರಾಠಾ, ನಾನು ಗುಜರಾತಿ, ನಾನು ಪಂಜಾಬಿ, ನಾನು ಜೈನ ಇತ್ಯಾದಿ ಭಿತ್ತಿ ಪತ್ರವನ್ನು ಪ್ರದರ್ಶಿಸಿ ಸಂದೇಶವನ್ನು ರವಾನೆ ಮಾಡಲಾಯಿತು. ಜೊತೆಗೆ ‘ಬಟೆಂಗೆ ತೋ ಕಟೆಂಗೇ’ ಎಂದು ಸಂದೇಶ ಸಾರುವ ರೂಪಕ ಪ್ರದರ್ಶನ ತೋರಿ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಬೇಕು ಎಂದು ರೂಪಕ ವಾಹನದ ಬ್ಯಾನರ್ನಲ್ಲಿ ಉಲ್ಲೇಖ ಮಾಡಲಾಗಿತ್ತು.