ವಿಜಯಪುರ: ಪೈಗಂಬರ್ ವಿರುದ್ದ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಯತ್ನಾಳ್ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ. ಈ ಮಧ್ಯೆ ಯತ್ನಾಳ್ ಪಾಕ್ ಪರ ಜೈಕಾರ ಹಾಕುವವರಿಗೆ ಚಪ್ಪಲಿಯೇಟು ಕೊಡಿ ಎಂದು ಗುಡುಗಿದ್ದಾರೆ.
ಇತ್ತೀಚೆಗೆ ಯತ್ನಾಳ್ ವಿರುದ್ಧ ನಡೆದ ಪ್ರತಿಭಟನೆ ವೇಳೆ ಸಚಿವ ಶಿವಾನಂದ ಪಾಟೀಲ್ ಅವರು ಬಸನಗೌಡ ಯತ್ನಾಳ್ ವಿರುದ್ಧ ವಿಜಯಪುರದಲ್ಲಿ ಸ್ಪರ್ಧಿಸುವ ಸವಾಲು ಹಾಕಿದ್ದರು. ಶಿವಾನಂದ ಪಾಟೀಲ್ಗೆ ಯತ್ನಾಳ್ ಮಾತಿನ ಮೂಲಕ ಟಾಂಗ್ ಕೊಟ್ಟಿದ್ದಾರೆ. ಅವನು ಶಿವಾನಂದ ಪಾಟೀಲ ಅಲ್ಲ. ಅವನು ಶಿವಾನಂದ ಹಚಡದ. ಅವನು ಅವನ ತಂದೆಗೆ ಹುಟ್ಟಿದ್ದರೆ ಬಸವನ ಬಾಗೇವಾಡಿ ಮತ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲಿ.
ಅವನ ರಾಜಿನಾಮೆಯನ್ನು ಸ್ಪೀಕರ್ ಅಂಗೀಕರಿಸಲಿ. ವಿಜಯಪುರಕ್ಕೆ ಬಂದು ಸ್ಪರ್ಧಿಸುವುದಲ್ಲ. ನಾನೇ ಅವರ ಕ್ಷೇತ್ರಕ್ಕೆ ಹೋಗುತ್ತೇನೆ. ನಾನೇ ಅಲ್ಲಿ ಸ್ಪರ್ಧಿಸುತ್ತೇನೆ. ಆ ವಿಜಯಾನಂದ ಮುಖಾ ನೋಡಿದರೆ ಗೊತ್ತಾಗುತ್ತದೆ. ಅವನು ಅವರ ತಂದೆಗೆ ಹುಟ್ಟಿದವನಲ್ಲ ಅನಿಸುತ್ತದೆ. ಅವನು ಇಲ್ಲಿ ಬಂದು ನಿಲ್ಲುವುದರಲ್ಲ. ನಾನೇ ಅಲ್ಲಿಗೆ ಹೋಗಿ ನಿಲ್ಲುತ್ತೇನೆ ಎಂದು ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ ರಾಜೀನಾಮೆ ನೀಡುವಂತೆ ಸವಾಲು ಹಾಕಿದ್ದಾರೆ.