ಬೆಂಗಳೂರು: ಈಗಂತೂ ಬೆಂಗಳೂರಿನಂತಹ ನಗರಗಳಲ್ಲಿ ಜನ ಸಾಮಾನ್ಯರು ಓಡಾಡುವುದಕ್ಕೂ ಕಷ್ಟ ಎನ್ನುವಂತಾಗಿದೆ.
ರಾಜ್ಯದಲ್ಲಿ ಪುಡಿರೌಡಿಗಳ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಂತೆಯೇ, ದುಡ್ಡಿಗಾಗಿ ಆಟೋ ಚಾಲಕನ ಕತ್ತಿಗೆ ಡ್ರ್ಯಾಗರ್ ಹಿಡಿದು ಬ್ಲಾಕ್ ಮೇಲ್ ಮಾಡಿರುವ ಘಟನೆ ಇಂದಿರಾನಗರದ ಎಸ್ ಎಸ್ ಬಿ ಸ್ಕೂಲ್ ಎದುರು ನಡೆದಿದೆ.
ದುಡ್ಡು ಕೊಟ್ಟಿಲ್ಲ ಅಂದ್ರೆ ಚಾಕುವಿನಿಂದ ಚುಚ್ಚುವುದಾಗಿ ಪುಂಡರು ಆಟೋ ಚಾಲಕನಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.