ಮೈಸೂರು: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಗೆ ಸಚಿವ ಜಮೀರ್, ಕರಿಯ ಅಂದಿರುವ ಸುದ್ದಿ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಅಲ್ಲದೇ, ಅದು ಚುನಾವಣೆಯ ಮೇಲೂ ಸಾಕಷ್ಟು ಪರಿಣಾಮ ಬೀರಿದೆ. ಚುನಾವಣೆ ವೇಳೆ ಇದೇ ವಿಷಯದ ಲಾಭ ಮಾಡಿಕೊಂಡಿರುವ ಕುಮಾರಸ್ವಾಮಿ, ಈಗ ಮೌನ ಮುರಿದಿದ್ದಾರೆ.
ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಅವರು, ನಾನು ಜಮೀರ್ ಗೆ ಕುಳ್ಳ ಅಂತ ಕರಿದಿಲ್ಲ. ದುಡ್ಡಿನ ಮದದಿಂದ ಕೊಂಡುಕೊಳ್ಳುವ ಹೇಳಿಕೆ ಕೊಟ್ಟಿದ್ದಾರೆ. ಆದರೆ, ಜನರು ಮಾತ್ರ ನಮಗೆ ಆಶೀರ್ವಾದ ಮಾಡಿದ್ದಾರೆ. ಇಂತಹ ಹೇಳಿಕೆಯನ್ನು ಅಮಾಯಕರು ಕೊಟ್ಟರೆ ಜೈಲಿಗೆ ಕಳಿಹಿಸುತ್ತಾರೆ. ಇದನ್ನು ಸಹ ಎಸ್ಐಟಿಗೆ ಕೊಡಲಿ. ಯಾವ ಸಮಯದಲ್ಲಿ ಯಾರ ಬಂದು ಕಾಲು ಹಿಡಿದಿದ್ದರು. ಇವರು ಏನೆಲ್ಲ ಮಾಡುತ್ತಿದ್ದರು ಎಂಬುವುದು ನಮಗೆ ಗೊತ್ತಿಲ್ಲವಾ ಎಂದು ಗುಡುಗಿದ್ದಾರೆ.
ನನ್ನ ಮತ್ತು ಜಮೀರ್ ಆತ್ಮೀಯತೆ ರಾಜಕೀಯವಾಗಿ ಮಾತ್ರ. ನಾನು ಯಾವತ್ತೂ ಕುಳ್ಳ ಅಂತ ಕರೆದಿಲ್ಲ. ಅವರ ಮಾತುಗಳೇ ಅವರ ಸಂಸ್ಕೃತಿ ತೋರಿಸುತ್ತದೆ. ಎಲ್ಲರೂ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇದು ಅನಾಗರಿಕ ಸರ್ಕಾರ. ದುಡ್ಡಿನ ಮದದಿಂದ ಈ ರೀತಿ ನಡೆದುಕೊಳ್ಳುತ್ತಿದ್ದಾರೆ. ತಾಯಿ ಮುಂದೆ ನಿಂತಿದ್ದೇನೆ. ಬಸವರಾಜ ಹೊರಟ್ಟಿ, ಏ ಕುಮಾರ್ ಎಂದಾಗ ಹೊಡೆಯಲು ಹೋದ ಗಿರಾಕಿ ಇದು. ಹೊರಟ್ಟಿ ಅವರು ಈಗಲೂ ಇದ್ದಾರೆ ಅವರನ್ನೇ ಕೇಳಿ. ಎಂದು ಜಮೀರ್ ವಿರುದ್ಧ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.