ಬೆಂಗಳೂರು : ಹೊಸ ತಿಂಗಳ ಆರಂಭದೊಂದಿಗೆ ನಮ್ಮ ದೈನಂದಿನ ಜೀವನ ಮತ್ತು ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರುವ ಹಲವು ಪ್ರಮುಖ ಬದಲಾವಣೆಗಳು ಜಾರಿಗೆ ಬರಲಿವೆ. ಸೆಪ್ಟೆಂಬರ್ 1ರಿಂದ ಎಲ್ಪಿಜಿ ಗ್ಯಾಸ್ ಸಿಲಿಂಡರ್ ನಿಯಮಗಳು, ವಿಮಾನ ಪ್ರಯಾಣ, ಬ್ಯಾಂಕಿಂಗ್ ಮತ್ತು ತೆರಿಗೆಗೆ ಸಂಬಂಧಿಸಿದಂತೆ ಪ್ರಮುಖ ಬದಲಾವಣೆಗಳು ಆಗಲಿವೆ. ಈ ಹೊಸ ನಿಯಮಗಳು ಜನಸಾಮಾನ್ಯರ ಜೇಬಿಗೆ ಹೇಗೆ ಕತ್ತರಿ ಕತ್ತರಿಸಬಹುದು ಅಥವಾ ಯಾವ ರೀತಿಯಲ್ಲಿ ನೆರವು ನೀಡಬಹುದು ಎಂಬುದರ ಸಂಪೂರ್ಣ ವಿವರ ಇಲ್ಲಿದೆ.
ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಮತ್ತು ಇ-ಕೆವೈಸಿ
ಅಡುಗೆ ಅನಿಲ ಗ್ರಾಹಕರಿಗೆ ಇದು ಅತ್ಯಂತು ಮುಖ್ಯವಾದ ಬದಲಾವಣೆಯಾಗಿದೆ. ಗ್ಯಾಸ್ ಸಂಪರ್ಕಕ್ಕಾಗಿ ಇ-ಕೆವೈಸಿ (e-KYC) ಪೂರ್ಣಗೊಳಿಸಲು ನೀಡಲಾಗಿದ್ದ ಗಡುವು ಆಗಸ್ಟ್ 31ಕ್ಕೆ ಮುಗಿಯಲಿದೆ. ಸೆಪ್ಟೆಂಬರ್ 1ರಿಂದ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸದಿದ್ದರೆ ಸಬ್ಸಿಡಿ ಅಥವಾ ಸಾಮಾನ್ಯ ದರದಲ್ಲಿ ಸಿಲಿಂಡರ್ ಪಡೆಯುವಲ್ಲಿ ತೊಂದರೆಯಾಗಬಹುದು. ಅಲ್ಲದೆ, ಪ್ರತಿ ತಿಂಗಳ ಮೊದಲ ದಿನದಂತೆ ಸೆಪ್ಟೆಂಬರ್ 1ರಂದು ಕೂಡ ಎಲ್ ಪಿಜಿ, ಸಿಎನ್ಜಿ ಮತ್ತು ಪಿಎನ್ ಜಿ ಬೆಲೆಗಳಲ್ಲಿ ಪರಿಷ್ಕರಣೆಯಾಗುವ ಸಾಧ್ಯತೆಯಿದೆ.
ವಿದೇಶಿ ಪ್ರಯಾಣಿಕರಿಗೆ ಹೊಸ ನಿಯಮ
ಭಾರತದಿಂದ ವಿದೇಶಗಳಿಗೆ ಪ್ರಯಾಣಿಸುವ ವಿಮಾನ ಪ್ರಯಾಣಿಕರಿಗೆ ವಲಸೆ ಪ್ರಕ್ರಿಯೆಯಲ್ಲಿ ದೊಡ್ಡ ಸಡಿಲಿಕೆ ನೀಡಲಾಗಿದೆ. ಇನ್ನು ಮುಂದೆ ಪ್ರಯಾಣಿಕರು ತಮ್ಮ ಬೋರ್ಡಿಂಗ್ ಪಾಸ್ ಮೇಲೆ ಕಡ್ಡಾಯವಾಗಿ ಸ್ಟಾಂಪ್ ಹಾಕಿಸಿಕೊಳ್ಳಬೇಕಾಗಿಲ್ಲ. ಮೊಬೈಲ್ ನಲ್ಲಿರುವ ಎಲೆಕ್ಟ್ರಾನಿಕ್ ಬೋರ್ಡಿಂಗ್ ಪಾಸ್ ಅಥವಾ ಅದರ ಮುದ್ರಿತ ಪ್ರತಿಯನ್ನು ತೋರಿಸುವ ಮೂಲಕ ಪ್ರಕ್ರಿಯೆಯನ್ನು ಸುಲಭವಾಗಿ ಪೂರ್ಣಗೊಳಿಸಬಹುದು.
ಬ್ಯಾಂಕ್ ಎಫ್ ಡಿ ನಿಯಮಗಳು
ಬ್ಯಾಂಕುಗಳ ನಿಶ್ಚಿತ ಠೇವಣಿ ಬಡ್ಡಿ ದರಗಳಿಗೆ ಸಂಬಂಧಿಸಿದಂತೆ ಹೊಸ ನಿಯಮಗಳು ರೂಪುಗೊಳ್ಳುತ್ತಿವೆ. ವಿಶೇಷವಾಗಿ 3 ಕೋಟಿ ರೂ. ಅಥವಾ ಅದಕ್ಕಿಂತ ಹೆಚ್ಚಿನ ದೊಡ್ಡ ಮೊತ್ತದ ಠೇವಣಿಗಳ ಬಡ್ಡಿ ದರಗಳನ್ನು ಪ್ರತಿದಿನ ಬ್ಯಾಂಕುಗಳು ತಮ್ಮ ವೆಬ್ ಸೈಟ್ ನಲ್ಲಿ ಪಾರದರ್ಶಕವಾಗಿ ಪ್ರಕಟಿಸಬೇಕಾಗುತ್ತದೆ.
ಇದನ್ನೂ ಓದಿ : ರಾಜ್ಯ ಸರ್ಕಾರದ RDPR ಇಲಾಖೆಯಲ್ಲಿ 65 ಹುದ್ದೆಗಳ ನೇಮಕಾತಿ : ಪಿಯುಸಿ ಪಾಸಾಗಿದ್ದರೆ ಸಾಕು


















