ವಿಮಾನ ಅಪಘಾತವೆನ್ನುವುದು ಗುಜರಾತ್ ನ ರಾಜಕಾರಣಿಗಳ ಜೀವಕ್ಕೆ ಕುತ್ತು ತಂದೊಡ್ಡಿದ್ದು ಇದೇ ಮೊದಲೇನಲ್ಲ. ನಿನ್ನೆ ನಡೆದ ಘನಘೋರ ವಿಮಾನ ಪತನದಲ್ಲಿ ಮಾಜಿ ಸಿಎಂ ವಿಜಯ್ ರುಪಾನಿ ಪ್ರಾಣತೆತ್ತಿದ್ದಾರೆ. ಆದರೆ, 1965ರ ಸೆಪ್ಟಂಬರ್ 19ರಂದು ನಡೆದು ಕರಾಳ ಅಧ್ಯಾಯವೊಂದು ಮತ್ತೆ ಚರ್ಚೆಗೆ ಗ್ರಾಸವಾಗಿದೆ.
ಅಹಮದಾಬಾದ್ ನಿಂದ ಸಣ್ಣದೊಂದು ಬೀಚ್ ಕ್ರಾಫ್ಟ್ ನಲ್ಲಿ ಮಿಥಾಪುರಕ್ಕೆ ಹೊರಟಿದ್ದ ಅಂದಿನ ಸಿಎಂ ಬಲವಂತ್ ರಾಯ್ ಕೂಡ ವಿಮಾನ ದುರಂತದಲ್ಲೇ ಪ್ರಾಣತೆತ್ತಿದ್ದರು. ಆಗ ಭಾರತ-ಪಾಕಿಸ್ತಾನ ನಡುವೆ ಯುದ್ಧ ನಡೆದಿತ್ತು. ಕಚ್ ವ್ಯಾಪ್ತಿಯಲ್ಲಿ ಸಾಗಿದ್ದ ಸಿಎಂ ಪ್ರಯಾಣಿಸುದ್ದಿದ್ದ ವಿಮಾನವನ್ನು ಪಾಕ್ ಹೊಡೆದುರುಳಿಸಿತ್ತು.
ಅಸಲಿಗೆ ಬಲವಂತ್ ರಾಯ್ ಪ್ರಯಾಣಿಸುತ್ತಿದ್ದ ವಿಮಾನವನ್ನು ಯುದ್ಧ ವಿಮಾನವೆಂದು ಭಾವಿಸಿ ಪಾಕ್ ಬಾಂಬ್ ದಾಳಿ ನಡೆಸಿತ್ತು. ಈ ದುರ್ಘಟನೆಯಲ್ಲಿ ಅಂದು ಗುಜರಾತ್ ಸಿಎಂ ಆಗಿದ್ದ ಬಲವಂತ್ ರಾಯ್, ಅವರ ಪತ್ನಿ ಸರೋಜ ಬೆನ್, ಓರ್ವ ಪತ್ರಕರ್ತ, ಇಬ್ಬರು ಸಿಬ್ಬಂದಿ ಮೃತರಾಗಿದ್ದರು. ಇದೀಗ ನಿನ್ನೆಯ ದುರ್ಘಟನೆ ಮಾಜಿ ಸಿಎಂ ರುಪಾನಿಯರವನ್ನು ಆಹುತಿ ಪಡೆದಿದೆ.