ಬೆಂಗಳೂರು: ನಗರದಲ್ಲಿ ಸುಮಾರು 17 ಕುಟುಂಬಗಳು ಬ್ಯಾಂಕ್ ಸಾಲ ಇದ್ದ ಕಟ್ಟಡ ಲೀಸ್ ಗೆ ಪಡೆದು ಈಗ ಫಜೀತಿಗೆ ಸಿಲುಕಿರುವ ಘಟನೆ ನಡೆದಿದೆ.
ಈ ಘಟನೆ ನಗರದ ಚಂದ್ರಲೇಔಟ್ ನ ಗಂಗೊಂಡನಹಳ್ಳಿಯಲ್ಲಿ ನಡೆದಿದೆ. ಹಿಂದೆ ಸುಧಾ ಎಂಬ ಮಹಿಳೆ ಕೆಲವು ವರ್ಷಗಳ ಹಿಂದೆ ಕೋ ಆಪರೇಟಿವ್ ಬ್ಯಾಂಕ್ನಲ್ಲಿ ಎರಡೂ ಕೋಟಿ ರೂ.ವರೆಗೆ ಸಾಲ ಪಡೆದು ಕಟ್ಟಡ ನಿರ್ಮಾಣ ಮಾಡಿದ್ದರು. ಕಟ್ಟಡದಲ್ಲಿ ಒಟ್ಟು 17 ಮನೆಗಳಿದ್ದು, ಎಲ್ಲವನ್ನೂ ಲೀಸ್ ಗೆ ನೀಡಿದ್ದರು. ಆದರೆ, ಬಾಡಿಗೆ ಪಡೆದವರಿಗೆ ಈ ವಿಚಾರ ಮಾತ್ರ ಗೊತ್ತಿರಲಿಲ್ಲ. ಈಗ ಲಕ್ಷಾಂತರ ರೂ. ನೀಡಿ ಲೀಸ್ ಗೆ ಹಾಕಿಕೊಂಡವರು ಸಂಕಷ್ಟ ಪಡುತ್ತಿದ್ದಾರೆ.
ಈಗ ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಕಟ್ಟಡ ಸೀಸ್ಗೆ ಮುಂದಾಗಿದ್ದಾರೆ. ಇದಕ್ಕೆ ಲೀಸ್ ಗೆ ಇದ್ದವರು ವಿರೋಧ ವ್ಯಕ್ತಪಡಿಸಿದ್ದಾರೆ. ಈಗ ಲೀಸ್ ನಲ್ಲಿದ್ದವರು ಸಂಕಷ್ಟ ಪಡುವಂತಾಗಿದೆ.