ಚಂದನವನದ ಸ್ಟಾರ್ ನಟ ಕಿಚ್ಚ ಸುದೀಪ್ ಆಪರೇಷನ್ ಸಿಂಧೂರದ ಬಗ್ಗೆ ಟ್ವೀಟ್ ಮಾಡಿದ್ದಾರೆ. ಪಹಲ್ಗಾಮ್ ನಲ್ಲಿ ಅಮಾಯಕ ಭಾರತೀಯ ನಾಗರಿಕರನ್ನು ಹತ್ಯೆ ಮಾಡಿದ ಪಾಕ್ ಉಗ್ರರ ಅಟ್ಟಹಾಸಕ್ಕೆ ಇಡೀ ಭಾರತೀಯರು ಕಣ್ಣೀರು ಹಾಕಿದ್ದರು. ಈಗ ಭಾರತೀಯ ಸೇನೆ ಪ್ರತೀಕಾರ ತೀರಿಸಿಕೊಳ್ಳುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ನಟ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ.
ವಿವಾಹಿತರನ್ನೇ ಟಾರ್ಗೇಟ್ ಮಾಡಿದ ಉಗ್ರರು ಭಾರತೀಯ ಹೆಣ್ಣು ಮಗಳ ಹಣೆಯ ಕುಂಕುಮ ಅಳಿಸಿ ಹಾಕುವಂತೆ ದಾಳಿ ಮಾಡಿದ್ದರು. ಈ ಘಟನೆಯಿಂದ ಎಚ್ಚೆತ್ತ ಪ್ರಧಾನಿ ನರೇಂದ್ರ ಮೋದಿ ಸರ್ಕಾರ, ಗಡಿ ಪ್ರದೇಶದಲ್ಲಿ ತೀವ್ರ ಕಟ್ಟೆಚ್ಚರ ವಹಿಸಿತ್ತು. ಬಳಿಕ ಒಂದೇ ವಾರದ ಒಳಗೆ ಕ್ಷಿಪಣಿ ದಾಳಿಯ ಮೂಲಕ ಪಾಕ್ನ ಪಾಪಿ ಉಗ್ರರನ್ನು ಬಗ್ಗು ಬಡಿದಿದೆ.
ಕ್ಷಿಪಣಿ ದಾಳಿಯಿಂದ ಪಾಕಿಸ್ತಾನ ಬೆಚ್ಚಿಬಿದ್ದಿದ್ದು, ಅಲ್ಲಿನ ಪರಿಸ್ಥಿತಿ ಗಂಭೀರತೆ ಪಡೆದುಕೊಂಡಿದೆ. ಇನ್ನು ದೇಶದಲ್ಲಿ ಏರ್ಪೋರ್ಟ್, ಗಡಿಭಾಗಗಳಲ್ಲಿ ನಿಗಾ ವಹಿಸಲಾಗಿದೆ. ಈ ಬಗ್ಗೆ ನಟ ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದು, ಭಾರತೀಯನಾಗಿ… ಈ ಪವಿತ್ರ ಭೂಮಿಯ ಮಗನಾಗಿ, ಪಹಲ್ಗಾಮ್ನಲ್ಲಿ ನಡೆದ ನೋವಿನ ಕಂಪನವನ್ನು ಅನುಭವಿಸಿದೆ. ಇಂದು, ನಾನು ನ್ಯಾಯದ ಗುಡುಗನ್ನು ಅನುಭವಿಸುತ್ತೇನೆ. ಆಪರೇಷನ್ ಸಿಂಧೂರ: ಕೇವಲ ಮಿಷನ್ ಅಲ್ಲ, ಒಂದು ಪವಿತ್ರ ಪ್ರತಿಜ್ಞೆ. ಭಾರತದ ಸಿಂದೂರಕ್ಕೆ ಕಲೆ ಬಿದ್ದಿತ್ತು… ನಮ್ಮ ಶೂರ ಸೈನಿಕರು ಬೆಂಕಿಯಿಂದ ಮತ್ತು ನಿಖರತೆಯಿಂದ ಅದರ ಗೌರವವನ್ನು ಮರಳಿ ಸ್ಥಾಪಿಸಿದರು. ನಮ್ಮ ಸಶಸ್ತ್ರ ಪಡೆಗಳಿಗೆ ನನ್ನ ಅಂತ್ಯವಿಲ್ಲದ ಸಲಾಂ. ನಮ್ಮ ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮತ್ತು ರಕ್ಷಣಾ ನಾಯಕತ್ವಕ್ಕೆ, ಎತ್ತರವಾಗಿ, ದೃಢವಾಗಿ ಮತ್ತು ನಿರ್ಭೀತವಾಗಿ ನಿಂತಿದ್ದಕ್ಕಾಗಿ ಧನ್ಯವಾದಗಳು. ಮತ್ತು ಕರ್ನಲ್ ಸೋಫಿಯಾ ಕುರೇಶಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರ ಚೂಪಾದ, ಘನತೆಯ ಬ್ರೀಫಿಂಗ್ಗೆ ಸಲಾಂ. ಭಾರತ ಮರೆಯುವುದಿಲ್ಲ. ಭಾರತ ಕ್ಷಮಿಸುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.