ಅಹಮದಾಬಾದ್: ಗುಜರಾತ್ ನಲ್ಲಿ ವಿಮಾನ ಪತನಗೊಂಡು ಅದರಲ್ಲಿದ್ದ 241 ಜನ ಸೇರಿದಂತೆ ಹಲವಾರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ವೀಕ್ಷಿಸಿ ಮಾಹಿತಿ ಪಡೆದುಕೊಂಡಿದ್ದಾರೆ.
ಈ ವೇಳೆ ಮಾತನಾಡಿದ ಅವರು, ಪತನಗೊಂಡ ಏರ್ ಇಂಡಿಯಾ (Air India) ವಿಮಾನವು ಸುಮಾರು 1.25 ಲಕ್ಷ ಲೀಟರ್ ಇಂಧನವನ್ನು ಹೊತ್ತೊಕೊಂಡು ಸಾಗುತ್ತಿತ್ತು. ಹೆಚ್ಚಿನ ತಾಪಮಾನದಿಂದಾಗಿ (Temperature) ಪ್ರಯಾಣಿಕರನ್ನು ರಕ್ಷಿಸಲು ಆಗಿಲ್ಲ. ಓರ್ವ ವ್ಯಕ್ತಿ ಮಾತ್ರ ಬದುಕು ಉಳಿದಿದ್ದಾರೆ. ಅಪಘಾತ ನಡೆದ 10 ನಿಮಿಷಗಳಲ್ಲಿ ಕೇಂದ್ರ ಸರ್ಕಾರಕ್ಕೆ ಮಾಹಿತಿ ಸಿಕ್ಕಿದೆ. ಕೂಡಲೇ ಸಚಿವರನ್ನು ಸಂಪರ್ಕಿಸಲಾಯಿತು. ಪ್ರಧಾನಿ ಅವರು ಕೂಡ ಸಂಪರ್ಕಿಸಿ ಸೂಕ್ತ ಕಾರ್ಯಚರಣೆ ನಡೆಸುವಂತೆ ಸೂಚಿಸಿದ್ದರು. 230 ಪ್ರಯಾಣಿಕರು ಮತ್ತು 12 ಸಿಬ್ಬಂದಿ ಇದ್ದರು. ಒಬ್ಬರು ದುರಂತದಿಂದ ಪಾರಾಗಿದ್ದು, ಡಿಎನ್ಎ ಪರಿಶೀಲನೆಯ ನಂತರ ಸಾವಿನ ಸಂಖ್ಯೆ ಘೋಷಿಸಲಾಗುವುದು ಎಂದಿದ್ದಾರೆ.