ಈದ್ ಮಿಲಾದ್ ನಂದು ನಾನು ಸಲ್ಮಾನ್ ಖಾನ್ ರನ್ನು ಭೇಟಿ ಮಾಡಿದ್ದೆ. ಅಂದೇ ನಾನು ಬಜರಂಗಿ ಭಾಯಿಜಾನ್ ಭಾಗ 2ರ ಒಂದೆಳೆಯನ್ನು ಸಲ್ಮಾನ್ ಗೆ ವಿವರಿಸಿದ್ದೆ. ಈ ಕತೆ ಅವರಿಗೆ ತುಂಬಾನೆ ಇಷ್ಟವಾಗಿದೆ. ಹೌದು, ಬಜರಂಗಿ ಭಾಯಿಜಾನ್ ಪಾರ್ಟ್ 2 ಬರುತ್ತೆ ಅಂತಾ ಹೇಳುತ್ತಲೇ ಬರಲಾಗುತ್ತಿದೆ. ಈ ಕುರಿತು ಈಗ ಖುದ್ದು ಬರಹಗಾರ ವಿಜಯೇಂದ್ರ ಪ್ರಸಾದ್ ಪ್ರತಿಕ್ರಿಯಿಸಿದ್ದಾರೆ.
ಬಜರಂಗಿ ಸರಣಿಯನ್ನು ಮುಂದುವರಿಸುವ ಚಿಂತನೆ ಇತ್ತು. ಅದಕ್ಕೊಂದು ಸೂಕ್ತ ಸಮಯಕ್ಕಾಗಿ ಕಾಯಲಾಗುತ್ತಿತ್ತು. ಈಗ ಅದಕ್ಕೆ ಕಾಲ ಕೂಡಿ ಬಂದಿದೆ. ನಾನು ಹೇಳಿದ ಒಂದೆಳೆ ಕತೆಯನ್ನು ಸಲ್ಮಾನ್ ಮೆಚ್ಚಿದ್ದಾರೆ. ಶೀಘ್ರವೇ ಕತೆಯನ್ನು ಪೂರ್ಣಗೊಳಿ ಮುಂದಿನ ಕಾರ್ಯಗಳನ್ನು ಆರಂಭಿಸುತ್ತೇವೆ ಅಂತಾ ಕತೆಗಾರ ವಿಜಯೇಂದ್ರ ಪ್ರಸಾದ್ ಸ್ಪಷ್ಟಪಡಿಸಿದ್ದಾರೆ. ಈ ಹಿಂದಿನ ಭಾಗಕ್ಕೆ ಕತೆ ಬರೆದಿದ್ದ ವಿಜಯೇಂದ್ರ ಪ್ರಸಾದ್, ಖ್ಯಾತ ನಿರ್ದೇಶದ ಎಸ್ ಎಸ್ ರಾಜಮೌಳಿಯವರ ತಂದೆ. ಈ ವರ್ಷಾಂತ್ಯಕ್ಕೆ ಸಿನಿಮಾದ ಕೆಲಸಗಳು ಆರಂಭವಾಗಲಿವೆ ಅಂತಲೂ ಅವರು ತಿಳಿಸಿದ್ದಾರೆ.