ಹಿಂದೆಂದೂ ಕಂಡಿಲ್ಲ…ಕೇಳಿಲ್ಲ…ಭಾರತದ ಇತಿಹಾಸದಲ್ಲೇ ಅತಿದೊಡ್ಡ ಕಾರ್ಯಾಚರಣೆ ನಡೆಸುವ ಮೂಲಕ ಗುಜರಾತ್ ಸರ್ಕಾರ ನೂತನ ಇತಿಹಾಸ ಬರೆದಿದೆ. ಹೌದು ನಿಜಕ್ಕೂ ಇದು ಅಂತಿಂಥಾ ಆಪರೇಷನ್ ಅಲ್ಲವೇ ಅಲ್ಲಾ. ಪಹಲ್ಗಾಮ್ ನರಮೇಧದ ಬೆನ್ನಲ್ಲೇ ಹೈ ಅಲರ್ಟ್ ನಲ್ಲಿರುವ ಗುಜರಾತ್ ಸರ್ಕಾರ ತನ್ನ ರಾಜ್ಯದಲ್ಲಿರುವ ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಹೊರಗಟ್ಟುವ ಕಾರ್ಯಕ್ಕೆ ಚಾಲನೆ ನೀಡಿದೆ.
74 ಜೆಸಿಬಿ, 200 ಟ್ರಕ್ ಗಳ ಮೂಲಕ ಕಾರ್ಯಾಚರಣೆ
ಪಹಲ್ಗಾಮ್ ಮರಣ ಮೃದಂಗ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿ ರಾಜ್ಯಗಳಲ್ಲೂ ಅಲ್ಲಿನ ಸರ್ಕಾರಗಳು ಅಕ್ರಮ ವಲಸಿಗರನ್ನು ಹುಡುಕಿ ಹೊರಗಟ್ಟಬೇಕು ಅಂತಾ ಫರ್ಮಾನು ಹೊರಡಿಸಿದರು. ಇದರ ಪ್ರತಿಫಲವೆನ್ನುವಂತೆ ಗುಜರಾತ್ ಸರ್ಕಾರ ಆಪರೇಷನ್ ಹಠಾವೋ ನಡೆಸಿದೆ. ಅಹಮದಾಬಾದ್ ನ ಚಂಡೋಲಾ ಕೆರೆಯ ಬಾಂಗ್ಲಾ ವಲಸಿಗರ ಸಿಯಾಸತ್ ಬಂಗಾಳ್ ವಾಸ್ ಕಾಲೋನಿ ಮೇಲೆ ದಾಳಿ ನಡೆಸಲಾಗಿದೆ.
ಈ ಕಾರ್ಯಾಚರಣೆಗೆ ಒಂದಲ್ಲಾ ಎರಡಲ್ಲಾ 74 ಜೆಸಿಬಿಗಳನ್ನು ಬಳಸಿಕೊಳ್ಳಲಾಗಿದೆ. 200 ಕ್ಕೂ ಹೆಚ್ಚು ಲಾರಿಗಳನ್ನು ಉಪಯೋಗಿಸಲಾಗಿದ್ದು 1 ಸಾವಿರಕ್ಕೂ ಹೆಚ್ಚು ಅಕ್ರಮ ಕಟ್ಟಡಗಳನ್ನು ಧರಾಶಾಹಿಗೊಳಿಸಲಾಗಿದೆ. ಭದ್ರತೆಗೆ 3 ಸಾವಿರ ಪೊಲೀಸರನ್ನು ನಿಯೋಜಿಸಲಾಗಿತ್ತು. ಈ ತೆರವು ಆಪರೇಷನ್ ನಲ್ಲಿ 1800 ಕಾರ್ಮಿಕರು ಪಾಲ್ಗೊಂಡಿದ್ದರು.
ಈ ನಡುವೆ, ಬಾಂಗ್ಲಾ ವಲಸಿಗರ ಮೇಲಿನ ದಾಳಿ ವಿರುದ್ಧ 18 ಅರ್ಜಿಗಳನ್ನು ಹೈಕೋರ್ಟ್ ನಲ್ಲಿ ದಾಖಲಿಸಲಾಗಿದೆ. ಯಾವೊಬ್ಬ ಪ್ರಜೆಯನ್ನು ವಲಸಿಗ ಅಂತಾ ತೀರ್ಮಾನಿಸುವ ವಿಚಾರ ವಿದೇಶಿಯರ ನ್ಯಾಯಮಂಡಳಿಗೆ ಬರುತ್ತೆ. ಸರ್ಕಾರ ಈ ಬಗ್ಗೆ ಕ್ರಮಕೈಗೊಂಡಿದ್ದು ತರವಲ್ಲ ಅಂತಾ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಅಷ್ಟೇ ಅಲ್ಲಾ ತುರ್ತಾಗಿ ಈ ಪ್ರಕರಣವನ್ನು ಇತ್ಯರ್ಥಗೊಳಿಸುವಂತೆಯೂ ಕೋರಲಾಗಿದೆ.