ಪಾಕಿಸ್ತಾನ ನಿನ್ನೆ ಭಾರತದ ಮೇಲೆ ಮತ್ತೆ ಆತ್ಮಾಹುತಿ ಡ್ರೋನ್ ದಾಳಿ ನಡೆಸಿತ್ತು.
ಅಂದಾಜು 400ಕ್ಕೂ ಹೆಚ್ಚು ಡ್ರೋನ್ ಗಳನ್ನು ಭಾರತದ ವಿರುದ್ಧ ಹಾರಿಬಿಡಲಾಗಿತ್ತು. ಇದಕ್ಕುತ್ತರವಾಗಿ ಭಾರತವೂ ತಕ್ಕ ತಿರುಗೇಟು ನೀಡಿದೆ. ಈ ಎಲ್ಲದರ ಬಗ್ಗೆ ಪ್ರಧಾನಿ ಮೋದಿ ಭೇಟಿ ಮಾಡಿದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಚರ್ಚೆ ನಡೆಸಿದ್ದಾರೆ.

ಭಾರತದ 4 ರಾಜ್ಯಗಳ 26 ಸ್ಥಳಗಳನ್ನು ಗುರಿಯಾಗಿಸಿ ಪಾಕ್ ದಾಳಿ ನಡೆಸಿತ್ತು. ಆದರೆ, ಭಾರತದ ಎಸ್ 400 ಹಾಗೂ ಆಕಾಶ್ ಏರ್ ಡಿಪೆನ್ಸ್ ಸಿಸ್ಟಂ ಗಳು ಎಲ್ಲ ಡ್ರೋನ್ ಗಳನ್ನು ಹೊಡೆದುರುಳಿಸಿದ್ದವು. ಅಷ್ಟೇ ಅಲ್ಲಾ ಇದಕ್ಕೆ ಪ್ರತ್ಯುತ್ತರವಾಗಿ ಇಸ್ಲಾಮಾಬಾದ್ ನ ನೂರ್ ಖಾನ್ ಏರ್ ಬೇಸ್ ನ್ನು ಭಾರತೀಯ ಸೇನೆ ಚಿಂದಿ ಉಡಾಯಿಸಿದೆ. ಈ ಬಗ್ಗೆ ಪ್ರಧಾನಿಗೆ ಸಂಪೂರ್ಣ ವಿವರಣೆ ನೀಡಿದ ದೋವಲ್, ಗಡಿಯಲ್ಲಿ ಕೈಗೊಂಡಿರುವ ಕಟ್ಟೆಚ್ಚರದ ಬಗ್ಗೆಯೂ ಮಾಹಿತಿ ನೀಡಿದ್ದಾರೆ.